For the best experience, open
https://m.kannadavani.news
on your mobile browser.
Advertisement

Dharmasthala Case: ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್‌ ಬೆಂಗಳೂರು: ಅನನ್ಯ ಭಟ್‌ ಎಂಬ ಮಗಳು ನನಗೆ ಇದ್ದದ್ದೇ ಸುಳ್ಳು. ಸತ್ತದ್ದೂ ಸುಳ್ಳು. ಗಿರೀಶ್‌ ಮಟ್ಟೆಣ್ಣವರ್‌ (Girish Mattannavar) ನನ್ನನ್ನು ಈ ಸುಳ್ಳು ಹೇಳುವಂತೆ ಪ್ರಚೋದಿಸಿದ್ದಾರೆ ಎಂದು ಧರ್ಮಸ್ಥಳದಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಆರೋಪಿಸಿದ್ದ ಸುಜಾತ ಭಟ್‌ ಎಂಬ ಮಹಿಳೆ ನುಡಿದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಾಡಿನಾದ್ಯಂತ ಸುದ್ದಿಯಲ್ಲಿರುವ ಸುಜಾತ ಭಟ್ ಅವರು ಯುಟ್ಯೂಬ್‌ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇದರ ವಿವರಗಳನ್ನು ಹೇಳಿದ್ದಾರೆ. ಇನ್‌ಸೈಟ್‌ರಷ್‌ (insightrush) ಎಂಬ ಚಾನೆಲ್‌ ಜೊತೆಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿರುವ ಸುಜಾತ ಭಟ್‌, ನನಗೆ ಮಗಳು ಇಲ್ಲ. ಆದರೆ ಆಸ್ತಿ ವಿಷಯದಲ್ಲಿ ನನಗೆ ಅನ್ಯಾಯವಾಗಿದೆ. ಆಸ್ತಿ ವಿಷಯದಲ್ಲಿ ನನಗೆ ನ್ಯಾಯ ಸಿಗಬೇಕು ಎಂದು ಬಯಸುತ್ತಿದ್ದಾಗ ಗಿರೀಶ್‌ ಮಟ್ಟೆಣ್ಣವರ್‌ ನನ್ನನ್ನು ಭೇಟಿಯಾಗಿ ಮಗಳು ಕಾಣೆಯಾಗಿದ್ದಾಳೆ ಎಂದು ಕಥೆ ಕಟ್ಟಿ ದೂರು ನೀಡುವಂತೆ ಪ್ರಚೋದಿಸಿದರು. ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲೂ ನಾನು ಕೆಲವು ದಿನ ಇದ್ದೆ ಎಂದು ತಿಳಿಸಿದ್ದಾರೆ. ನನ್ನ ಕುಟುಂಬದ ದೇವರನ್ನು ಬೇರೊಂದು ಸಮುದಾಯಕ್ಕೆ ನೀಡಿದ್ದು ನನಗೆ ನೋವು ತಂದಿತ್ತು. ಆಸ್ತಿಯಲ್ಲಿ ನನ್ನ ಹಕ್ಕನ್ನು ಪಡೆಯಲು ಈ ದಾರಿ ಹಿಡಿಯಬೇಕಾಯಿತು. ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತದೆ ಮತ್ತು ನನ್ನ ತೇಜೋವಧೆಗೆ ಕಾರಣವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ, ಗಿರೀಶ್‌ ಮಟ್ಟೆಣ್ಣವರ್‌ ಹಾಗೂ ಜಯಂತ್‌ ಟಿ. ಎಂಬವರು ಸೇರಿಕೊಂಡು ಇದನ್ನು ಮಾಡಿಸಿದರು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ನಾನು ಆಸ್ತಿ ಸಲುವಾಗಿ ಆ ರೀತಿಯ ಸುಳ್ಳು ಹೇಳಬೇಕಾದ ಸನ್ನಿವೇಶ ಬಂತು. ನನ್ನ ತಾತನ ಆಸ್ತಿಯನ್ನು ನನ್ನ ಗಮನಕ್ಕೆ ತಾರದೇ ನೀಡಲಾಗಿದೆ. ನನಗೂ ಕೂಡ ಆಸ್ತಿಯಲ್ಲಿ ಹಕ್ಕು ಇದೆ. ಇದಲ್ಲದೇ ನನ್ನ ಸಹಿ ಕೂಡ ಪಡೆಯದೆ, ಆಸ್ತಿಯನ್ನು ನೀಡುವಾಗ ನನ್ನ ಗಮನಕ್ಕೂ ತರಲಿಲ್ಲ. ಅ ಸಿಟ್ಟಿನಿಂದ ಅವರು ಹೇಳಿದ ಹಾಗೆ ನಾನು ಮಾಡಿದೆ. ನಾನು ನಾಡಿನ ಜನತೆಯ ಮುಂದೆ ಕೈಜೋಡಿಸಿ ಪ್ರಾರ್ಥಿಸುತ್ತೇನೆ, ನನ್ನನ್ನು ಕ್ಷಮಿಸಿ. ನಾನು ಧರ್ಮಸ್ಥಳ ಕ್ಷೇತ್ರದ ವಿರುದ್ಧವಾಗಲೀ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆಯಾಗಲೀ ಮಾತನಾಡಿಲ್ಲ. ಧರ್ಮಸ್ಥಳದ ಭಕ್ತರ ಭಾವನೆಗೆ ನೋವುಂಟುಮಾಡುವ ಉದ್ದೇಶ ನನಗೆ ಇಲ್ಲ ಎಂದು ಅವರು ಕೇಳಿಕೊಂಡಿದ್ದಾರೆ.

ಬೆಂಗಳೂರು: ಅನನ್ಯ ಭಟ್‌ ಎಂಬ ಮಗಳು ನನಗೆ ಇದ್ದದ್ದೇ ಸುಳ್ಳು. ಸತ್ತದ್ದೂ ಸುಳ್ಳು. ಗಿರೀಶ್‌ ಮಟ್ಟೆಣ್ಣವರ್‌ (Girish Mattannavar) ನನ್ನನ್ನು ಈ ಸುಳ್ಳು ಹೇಳುವಂತೆ ಪ್ರಚೋದಿಸಿದ್ದಾರೆ ಎಂದು ಧರ್ಮಸ್ಥಳದಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಆರೋಪಿಸಿದ್ದ ಸುಜಾತ ಭಟ್‌ ಎಂಬ ಮಹಿಳೆ ನುಡಿದಿದ್ದಾರೆ.
11:25 PM Aug 22, 2025 IST | ಶುಭಸಾಗರ್
ಬೆಂಗಳೂರು: ಅನನ್ಯ ಭಟ್‌ ಎಂಬ ಮಗಳು ನನಗೆ ಇದ್ದದ್ದೇ ಸುಳ್ಳು. ಸತ್ತದ್ದೂ ಸುಳ್ಳು. ಗಿರೀಶ್‌ ಮಟ್ಟೆಣ್ಣವರ್‌ (Girish Mattannavar) ನನ್ನನ್ನು ಈ ಸುಳ್ಳು ಹೇಳುವಂತೆ ಪ್ರಚೋದಿಸಿದ್ದಾರೆ ಎಂದು ಧರ್ಮಸ್ಥಳದಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಆರೋಪಿಸಿದ್ದ ಸುಜಾತ ಭಟ್‌ ಎಂಬ ಮಹಿಳೆ ನುಡಿದಿದ್ದಾರೆ.

Dharmasthala Case: ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್‌

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ಬೆಂಗಳೂರು: ಅನನ್ಯ ಭಟ್‌ ಎಂಬ ಮಗಳು ನನಗೆ ಇದ್ದದ್ದೇ ಸುಳ್ಳು. ಸತ್ತದ್ದೂ ಸುಳ್ಳು. ಗಿರೀಶ್‌ ಮಟ್ಟೆಣ್ಣವರ್‌ (Girish Mattannavar) ನನ್ನನ್ನು ಈ ಸುಳ್ಳು ಹೇಳುವಂತೆ ಪ್ರಚೋದಿಸಿದ್ದಾರೆ ಎಂದು ಧರ್ಮಸ್ಥಳದಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಆರೋಪಿಸಿದ್ದ ಸುಜಾತ ಭಟ್‌ ಎಂಬ ಮಹಿಳೆ ನುಡಿದಿದ್ದಾರೆ.

Advertisement

 ಕಳೆದ ಒಂದು ತಿಂಗಳಿನಿಂದ ನಾಡಿನಾದ್ಯಂತ ಸುದ್ದಿಯಲ್ಲಿರುವ ಸುಜಾತ ಭಟ್ ಅವರು ಯುಟ್ಯೂಬ್‌ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇದರ ವಿವರಗಳನ್ನು ಹೇಳಿದ್ದಾರೆ.

ಇನ್‌ಸೈಟ್‌ರಷ್‌ (insightrush) ಎಂಬ ಚಾನೆಲ್‌ ಜೊತೆಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನ ನೀಡಿರುವ ಸುಜಾತ ಭಟ್‌, ನನಗೆ ಮಗಳು ಇಲ್ಲ. ಆದರೆ ಆಸ್ತಿ ವಿಷಯದಲ್ಲಿ ನನಗೆ ಅನ್ಯಾಯವಾಗಿದೆ. ಆಸ್ತಿ ವಿಷಯದಲ್ಲಿ ನನಗೆ ನ್ಯಾಯ ಸಿಗಬೇಕು ಎಂದು ಬಯಸುತ್ತಿದ್ದಾಗ ಗಿರೀಶ್‌ ಮಟ್ಟೆಣ್ಣವರ್‌ ನನ್ನನ್ನು ಭೇಟಿಯಾಗಿ ಮಗಳು ಕಾಣೆಯಾಗಿದ್ದಾಳೆ ಎಂದು ಕಥೆ ಕಟ್ಟಿ ದೂರು ನೀಡುವಂತೆ ಪ್ರಚೋದಿಸಿದರು.

ಇದನ್ನೂ ಓದಿ:-Darmasthala: ಶವ ಶೋಧ ಕಾರ್ಯದಲ್ಲಿ ಸಿಕ್ಕ ಪಾನ್ ಕಾರ್ಡ,ಡೆಬಿಟ್ ಕಾರ್ಡ ರಹಸ್ಯ ಬಯಲು 

 ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲೂ ನಾನು ಕೆಲವು ದಿನ ಇದ್ದೆ ಎಂದು ತಿಳಿಸಿದ್ದಾರೆ.

ನನ್ನ ಕುಟುಂಬದ ದೇವರನ್ನು ಬೇರೊಂದು ಸಮುದಾಯಕ್ಕೆ ನೀಡಿದ್ದು ನನಗೆ ನೋವು ತಂದಿತ್ತು. ಆಸ್ತಿಯಲ್ಲಿ ನನ್ನ ಹಕ್ಕನ್ನು ಪಡೆಯಲು ಈ ದಾರಿ ಹಿಡಿಯಬೇಕಾಯಿತು.

ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತದೆ ಮತ್ತು ನನ್ನ ತೇಜೋವಧೆಗೆ ಕಾರಣವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ, ಗಿರೀಶ್‌ ಮಟ್ಟೆಣ್ಣವರ್‌ ಹಾಗೂ ಜಯಂತ್‌ ಟಿ. ಎಂಬವರು ಸೇರಿಕೊಂಡು ಇದನ್ನು ಮಾಡಿಸಿದರು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:-Karnataka| ತಿಮ್ಮನಿಗೆ ಜೈಲು|ಜಮೀರ್ ಗೆ ರಿಲೀಫ್ ಏನಾಯ್ತು ಇಡೀ ದಿನ ,ವಿವರ ನೋಡಿ

ನಾನು ಆಸ್ತಿ ಸಲುವಾಗಿ ಆ ರೀತಿಯ ಸುಳ್ಳು ಹೇಳಬೇಕಾದ ಸನ್ನಿವೇಶ ಬಂತು. ನನ್ನ ತಾತನ ಆಸ್ತಿಯನ್ನು ನನ್ನ ಗಮನಕ್ಕೆ ತಾರದೇ ನೀಡಲಾಗಿದೆ. ನನಗೂ ಕೂಡ ಆಸ್ತಿಯಲ್ಲಿ ಹಕ್ಕು ಇದೆ. ಇದಲ್ಲದೇ ನನ್ನ ಸಹಿ ಕೂಡ ಪಡೆಯದೆ, ಆಸ್ತಿಯನ್ನು ನೀಡುವಾಗ ನನ್ನ ಗಮನಕ್ಕೂ ತರಲಿಲ್ಲ. ಅ ಸಿಟ್ಟಿನಿಂದ ಅವರು ಹೇಳಿದ ಹಾಗೆ ನಾನು ಮಾಡಿದೆ. ನಾನು ನಾಡಿನ ಜನತೆಯ ಮುಂದೆ ಕೈಜೋಡಿಸಿ ಪ್ರಾರ್ಥಿಸುತ್ತೇನೆ, ನನ್ನನ್ನು ಕ್ಷಮಿಸಿ. ನಾನು ಧರ್ಮಸ್ಥಳ ಕ್ಷೇತ್ರದ ವಿರುದ್ಧವಾಗಲೀ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆಯಾಗಲೀ ಮಾತನಾಡಿಲ್ಲ. ಧರ್ಮಸ್ಥಳದ ಭಕ್ತರ ಭಾವನೆಗೆ ನೋವುಂಟುಮಾಡುವ ಉದ್ದೇಶ ನನಗೆ ಇಲ್ಲ ಎಂದು ಅವರು ಕೇಳಿಕೊಂಡಿದ್ದಾರೆ.

ಸಂದರ್ಶನದ ಲಿಂಕ್ ಇಲ್ಲಿದೆ:-

https://www.facebook.com/share/v/1Fu8mR3AfP/

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ