Karwar:ಎರಡು ವರ್ಷವಾದ್ರೂ ನಡೆಯದ ಕಾಮಗಾರಿ ಆ ಊರಿಗೆ ಕಚ್ಚಾ ರಸ್ತೆಯೇ ಖಾತ್ರಿ
Karwar:ಎರಡು ವರ್ಷವಾದ್ರೂ ನಡೆಯದ ಕಾಮಗಾರಿ ಆ ಊರಿಗೆ ಕಚ್ಚಾ ರಸ್ತೆಯೇ ಖಾತ್ರಿ
ಕಾರವಾರ :- ಕಾರವಾರದ(karwar) ಗುಡ್ಡಳ್ಳಿ ಗ್ರಾಮವು ನಗರಸಭೆಯ ವ್ಯಾಪ್ತಿಯಲ್ಲಿದ್ದರೂ ಸೂಕ್ತ ರಸ್ತೆ ಸಂಪರ್ಕವಿಲ್ಲದೇ ಕುಗ್ರಾಮದಂತಾಗಿದೆ. ಮಳೆಗಾಲ ಸಮೀಪಿಸುತ್ತಿದ್ದರೂ ರಸ್ತೆ ಕಾಮಗಾರಿ ನಡೆಯದೇ ಜನರು ಪರಿತಪಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಗುಡ್ಡಳ್ಳಿಯ(guddalli) ಜನರಿಗಿದ್ದ ರಸ್ತೆಯ ಕನಸು ಮಳೆಗಾಲ ಸನಿಹವಾದರೂ ಕನಸಾಗಿಯೇ ಉಳಿದಿದೆ. ನಗರದ ಹೈ ಚರ್ಚ್ ನಿಂದ ಸುಮಾರು ಐದು ಕಿಲೋಮೀಟರ್ ದುರ್ಗಮ ಹಾದಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ನಗರಸಭೆಯಿಂದ ಗುತ್ತಿಗೆ ನೀಡಲಾಗಿತ್ತು. 50 ಲಕ್ಷ ರೂ. ವೆಚ್ಚದ ಗುತ್ತಿಗೆಯಾದರು ಎರಡು ವರ್ಷಗಳು ಯಾವುದೇ ಕಾಮಗಾರಿ ನಡೆದಿಲ್ಲ.
ಇದನ್ನೂ ಓದಿ:-Karwar :ಕಾಳಿ ನದಿಯಲ್ಲಿ ಬಿದ್ದ ಯುವಕನ ಶ***ವ ಪತ್ತೆ
ಕಾರವಾರ ನಗರವೇ ಕಾಣುವಷ್ಟು ಎತ್ತರದಲ್ಲಿರುವ ಈ ಗ್ರಾಮಕ್ಕೆ ಹೋಗುವ ದಾರಿಯೇ ಕಷ್ಟಕರ. ಕಡಿದಾದ ದಾರಿ, ಎದೆಗೆ ತಾಕುವಂತಹ ಏರಿ, ಮಧ್ಯ ಮಳೆಗಾದಲ್ಲಿ ಹರಿಯುವ ನಾಲ್ಕಾರು ಹಳ್ಳಗಳು. ದ್ವಚಕ್ರ ವಾಹನದಲ್ಲಿ ಸಾಗಿದರೂ ತಲುಪುವುದು ಕಷ್ಟಸಾಧ್ಯ. ಇಂತಹ ಭೌಗೋಳಿಕತೆಯಿಂದಲೇ ಇಷ್ಟು ವರ್ಷಗಳ ಕಾಲ ರಸ್ತೆ ನಿರ್ಮಾಣ ದೂರದ ಮಾತಾಗಿತ್ತು. ಆದರೆ ಇದೀಗ ತಂತ್ರಜ್ಞಾನ ಬೆಳೆದರೂ ಗುತ್ತೆಗೆ ಪಡೆದವರು ಮಾತ್ರ ರಸ್ತೆ ನಿರ್ಮಾಣಕ್ಕೆ ಮುಂದಾಗಿಲ್ಲ.
ಇದನ್ನೂ ಓದಿ:-Karwar|ನಗರಸಭೆ ವಾರ್ಡ ಗೆ ರಸ್ತೆ ಇಲ್ಲ ಕಟ್ಟಿಗೆ ಕಂಬಕ್ಕೆ ಶವ ಕಟ್ಟಿ ಹೊತ್ತ ವಾರ್ಡ ಜನ
ರಸ್ತೆಯ ಬೇಡಿಕೆಯನ್ನಿಟ್ಟು ಗ್ರಾಮಸ್ಥರು ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದರೂ ಕಾಮಗಾರಿ ಮಾತ್ರ ನಡೆದಿಲ್ಲ. ಅಲ್ಲದೇ ನಗರಸಭೆಯ ಪ್ರತಿ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದರೂ ಪ್ರಯೋಜನವಾಗಿಲ್ಲ. ಇದೀಗ ಕೆಲವು ತಿಂಗಳ ಹಿಂದೆ ಐದು ಕಿಲೋಮೀಟರ್ ರಸ್ತೆಯ ಪೈಕಿ 2.32 ಕಿಲೋಮೀಟರ್ ರಸ್ತೆಯಲ್ಲಿ ಕಾಂಕ್ರೀಟ್ ಮಿಶ್ರಿತ ಜೆಲ್ಲಿ ಕಲ್ಲಿಗಳನ್ನು ಹಾಕಲಾಗಿದೆ. ಆದರೆ ಒಂದು ದಿನವೂ ಸರಿಯಾಗಿ ನೀರು ಹಾಕಿಲ್ಲ, ಹೀಗಾಗಿ ಮಣ್ಣಿನ ರಸ್ತೆಗೆ ಜೆಲ್ಲಿ ಕಲ್ಲುಗಳು ಸರಿಯಾಗಿ ಹೊಂದಿಕೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಅಭಿವೃದ್ಧಿ, ರಸ್ತೆ ಅಧೋಗತಿ.
ನಗರಸಭೆಯಿಂದ 30 ಮನೆಗಳಿರುವ ಗುಡ್ಡಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಆದರೆ ಗ್ರಾಮದ ಸಂಪರ್ಕ ರಸ್ತೆಯೇ ಹದಗೆಟ್ಟಿದ್ದು ಅಭಿವೃದ್ಧಿ ಇದ್ದರೂ ಇಲ್ಲದಂತಾಗಿದೆ. ನಗರಸಭೆಗಯಿಂದ ಗ್ರಾಮದಲ್ಲಿದ್ದ ಬಾವಿಯೊಂದನ್ನು ಸ್ವಚ್ಚಗೊಳಿಸಿ ಪಂಪ್ ಅಳವಡಿಲಾಗಿದೆ. ಅದರಿಂದ ಗ್ರಾಮದ ಮನೆಗಳಿಗೆ ಉತ್ತಮ ನೀರಿನ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ಗ್ರಾಮದಲ್ಲಿ ಅಂಗನವಾಡಿ ಇದೆ. ನಗರಸಭೆಯಿಂದ ಅಂಗನವಾಡಿಗೆ ಬಣ್ಣ ಹೊಡೆಸಲಾಗಿದೆ. ಜತೆಗೆ ಅಂಗನವಾಡಿ ಸುತ್ತತೂ ಬೇಲಿಯ ವ್ಯವಸ್ಥೆ ಮಾಡಿದ್ದು ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಆದರೆ ಊರಿಗೆ ಸಂಪರ್ಕ ಮಾಡುವ ರಸ್ತೆ ಮಾತ್ರ ಕಾಲ್ನಡಿಗೆಗೂ ಯೋಗ್ಯವಾಗಿಲ್ಲ. ಅಂಗನವಾಡಿ ಮುಗಿಸಿದ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಅವರ ನಡೆದು ಬರುವುದು ಕೂಡ ಕಷ್ಟವಾಗಿದೆ ಎಂದು ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಅನಾರೋಗ್ಯವಾದರೆ ಜೋಳಿಗೆಯೇ ಗತಿ.
ಗ್ರಾಮಸ್ಥರು ಈಗಾಗಲೇ ಮಳೆಗಾಲಕ್ಕೆ ಬೇಕಾದ ದವಸ ಧಾನ್ಯಗಳನ್ನು ಸಂಗ್ರಹಿಸಿದ್ದಾರೆ. ಆದರೆ ಹೊಟ್ಟೆಪಾಡಿಗೆ ಕೆಲಸಕ್ಕೆ ಹೋಗಲೇ ಬೇಕಾಗುತ್ತದೆ. ಹೀಗಾಗಿ ನಿತ್ಯವೂ ಐದು ಕಿಲೋಮೀಟರ್ ಗುಡ್ಡವನ್ನು ಕಚ್ಚಾ ರಸ್ತೆಯಲ್ಲಿ ಇಳಿದು ಹತ್ತುವ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ಗ್ರಾನಸ್ಥರು ಅನಾರೋಗ್ಯಕ್ಕೆ ಈಡಾದರೆ ಆಸ್ಪತ್ರೆಗೆ ಸಾಗಿಸುವುದೂ ಕೂಡ ಕಷ್ಟವಾಗಿದೆ.
ಇದನ್ನೂ ಓದಿ:-Karnataka :ಗುಲಾಮನೊಬ್ಬ ದೈವವಾದ ಕತೆ: ಈತನಿಗೆ ಮದ್ಯ,ಸಿಗರೇಟೇ ನೈವೇದ್ಯ!
ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮೃತರಾದ ಗ್ರಾಮದ ಓರ್ವರ ಮೃತದೇಹವನ್ನು ಹೈಚರ್ಚ್ ಬಳಿಯಿಂದ ಜೋಳಿಗೆಯಲ್ಲಿಯೇ ಸಾಗಿಸಲಾಗಿತ್ತು. ಘಟನೆ ನಡೆದ ಕೆಲವು ದಿನಗಳು ನಗರಸಭೆಯಿಂದ ಗುಡ್ಡದ ಸಂಪರ್ಕಕ್ಕೆ ವಾಹನ ವ್ಯವಸ್ಥೆ ಮಾಡಲಾಗುತ್ತು. ಇದೀಗ ಕಾಲ್ನಡಿಗೆಯೇ ಖಾತ್ರಿ ಎನ್ನುವಂನತಾಗಿದೆ.