karwar :ಅಂತೂ ಕಾರವಾರಕ್ಕೆ ಹಿಡಿದ ಗ್ರಹಣ ಬಿಟ್ಟಿತು- ಎಸಿ ಕಾನಿಷ್ಕ್ ವರ್ಗಾವಣೆ.
karwar :ಅಂತೂ ಕಾರವಾರಕ್ಕೆ ಹಿಡಿದ ಗ್ರಹಣ ಬಿಟ್ಟಿತು- ಎಸಿ ಕಾನಿಷ್ಕ್ ವರ್ಗಾವಣೆ.
ಕಾರವಾರ :- ಕಾರವಾರ ತಾಲೂಕಿನ ಎಸಿ (assistant commissioner) ಕಾನಿಷ್ಕ (IAS kanishka) ನನ್ನು ಕೊನೆಗೂ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಈತನನ್ನು ಅಸಿಸ್ಟೆಂಟ್ ಕಮಿಷಿನರ್ ಕಮರ್ಷಿಯಲ್ ಟ್ಯಾಕ್ಸ್ ಬೆಂಗಳೂರಿಗೆ ವರ್ಗಾವಣೆ ಮಾಡಿದೆ.
2021 ರ IAS ಕರ್ನಾಟಕ ಕೇಡರ್ ಬ್ಯಾಚ್ ನ ಅಧಿಕಾರಿ ಆಗಿರುವ ಈತ ವರ್ಗಾವಣೆ ಆಗಿರುವುದು ಕಾರವಾರಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ. ಅಧಿಕಾರ ದರ್ಪದಿಂದ ಓಡಾಡುತಿದ್ದ ಈತ ಯಾವತ್ತೂ ಜನರ ಸಂಕಷ್ಟ ಆಲಿಸುತ್ತಿರಲಿಲ್ಲ. ಜನರು ಈತನ ಬಳಿ ಅಪಾಯಂಟಮ್ಮೆಂಟ್ ತೆಗೆದುಕೊಂಡು ಹೋಗಬೇಕಿತ್ತು. ಈತನ ಕಚೇರಿ ಒಳಗೆ ಸಾರ್ವಜನಿಕರು ತಮ್ಮ ಮೊಬೈಲ್ ಸಹ ತರುವಂತಿರಲಿಲ್ಲ. ಎಲ್ಲಾ ಎಸಿಗಳಿಗೆ ಒಂದು ಕಾರಾದರೇ ಈತನಿಗೇ ಒಂದು ಕಾರು, ಈತ ಹೊರಗೆ ಮಳೆಯಲ್ಲಿ ಹೋದರೆ ಅಧಿಕಾರಿಗಳು ಈತನ ತಲೆಗೆ ಕೊಡೆ ಹಿಡಿದು ನಿಲ್ಲಬೇಕು . ಜನರು ಮನವಿ ಕೊಡಲು ಸಹ ಹತ್ತಿರ ಬಿಟ್ಟಿಕೊಳ್ಳದ ವಿಚಿತ್ರ ಮೋನೋಭಾವದ ವ್ಯಕ್ತಿಯಾಗಿದ್ದ ಕಾನಿಷ್ಕ್ ಉಪಣಳ ಸಹಿಸಿಕೊಂಡು ಅಧಿಕಾರಿಗಳು ಬೆಸ್ತು ಬಿದ್ದಿದ್ದರು.
ಜಿಲ್ಲೆಗೆ ಬಂದಾಗ ಒಂದೂ ತಾನು ಉತ್ತಮ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳದ ಕೆಲಸ ಮಾಡದಿದ್ದರೂ ಯಾರೂ ಮಾಡಿದ ಕೆಲಸವನ್ನು ತಾನು ಮಾಡಿದೆ ಎಂಬಂತೆ ಬಿಂಬಿಸಿಕೊಂಡು ಕಂದಾಯ ಇಲಾಖೆಯ ಉತ್ತಮ ಕಂದಾಯ ಅಧಿಕಾರಿ -2024 ನ್ನು ಪಡೆದಿದ್ದನು.
ಒಟ್ಟಿನಲ್ಲಿ ಕೊನೆಗೂ ಈ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಕಾರವಾರ ತಾಲೂಕಿಗೆ ಹಿಡಿದ ಗ್ರಹಣ ಬಿಟ್ಟಂತಾಗಿದೆ.