Karwar :ಕಾರವಾರದಲ್ಲಿ ಅಬ್ಬರಿಸಿದ ಸಮುದ್ರ - ಮೀನುಗಾರಿಕಾ ಬೋಟುಗಳಿಗೆ ಹಾನಿ
Karwar :ಕಾರವಾರದಲ್ಲಿ ಅಬ್ಬರಿಸಿದ ಸಮುದ್ರ - ಮೀನುಗಾರಿಕಾ ಬೋಟುಗಳಿಗೆ ಹಾನಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಮಳೆಯ(Rain) ಅಬ್ಬರ ಇಂದು ಸಹ ಮುಂದುವರೆದಿದೆ. ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾದರೇ ಕರಾವಳಿ ಭಾಗದಲ್ಲಿ ಚದುರಿದ ಭಾರಿ ಗಾಳಿ ಜೊತೆ ಮಳೆಯಾಗಿದೆ.
ಕರಾವಳಿ ಭಾಗದಲ್ಲಿನ ಅರಬ್ಬಿ ಸಮುದ್ರದಲ್ಲಿ 40 ರಿಂದ 45 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು ಅಲೆಗಳ ಅಬ್ಬರ ಹೆಚ್ಚಳವಾಗಿದೆ.
ಒಂದೆಡೆ ಅಲೆಗಳ ಅಬ್ಬರ ಹಾಗೂ ಮತ್ತೊಂದೆಡೆ ಸಮುದ್ರದಲ್ಲಿನ "ಭರತ " ತೀರ ಪ್ರದೇಶದಲ್ಲಿ ಕಡಲು ಉಕ್ಕಿದ್ದು ಹಲವು ಅನಾಹುತವನ್ನು ತಂದೊಡ್ಡಿದೆ.
ಕಡಲ ಅಬ್ಬರದ ದೃಶ್ಯಗಳು:-

ಕಾರವಾರ ಕಡಲ ತೀರ ಭಾಗದಲ್ಲಿ ಅಲೆಗಳ ಅಬ್ಬರದ ಜೊತೆಗೆ ಭರತ ಹೆಚ್ಚಾಗಿದ್ದರಿಂದ ಸಮುದ್ರದ ನೀರು ತೀರ ಭಾಗದಲ್ಲಿ ಉಕ್ಕಿದೆ. ಇದರ ಪರಿಣಾಮ ಕಾರವಾರದ ಲಂಡನ್ ಬ್ರಿಡ್ಜ್ ಭಾಗದ ಕಡಲ ತೀರದಲ್ಲಿ ನಿಲ್ಲಿಸಿಟ್ಟಿದ್ದ ಬೋಟುಗಳಿಗೆ ಹಾನಿಯಾಗಿದೆ. ಇನ್ನು ಮೀನುಗಾರರ ಶಡ್ ಗೂ ಹಾನಿಯಾಗಿದ್ದು ತೀರ ಭಾಗದಲ್ಲಿ ಸಮುದ್ರಕೊರತ ಉಂಟಾಗಿ ಹಾನಿ ಸಂಭವಿಸಿತು.
ಇದನ್ನೂ ಓದಿ:-karwar :ಅಂತೂ ಕಾರವಾರಕ್ಕೆ ಹಿಡಿದ ಗ್ರಹಣ ಬಿಟ್ಟಿತು- ಎಸಿ ಕಾನಿಷ್ಕ್ ವರ್ಗಾವಣೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂ.24 ರಿಂದ 26 ರ ವರೆಗೆ ಆರೆಂಜ್ ಅಲರ್ಟ ನೀಡಲಾಗಿದೆ. ಇನ್ನು ಸಮುದ್ರ ತೀರದಲ್ಲಿ ಹೆಚ್ಚಿನ ಅಲೆಗಳು ಏಳುವ ಸಾಧ್ಯತೆಗಳಿದ್ದು , ಸಂಪ್ರದಾಯಿಕ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ.
