Karwar: ಮೀನುಹಿಡಿಯಲು ಹೋಗಿ ನದಿ ಪಾಲಾದ ಯುವಕ
Karwar: ಮೀನುಹಿಡಿಯಲು ಹೋಗಿ ನದಿ ಪಾಲಾದ ಯುವಕ

ಕಾರವಾರ :- ಮೀನು ಹಿಡಿಯಲು ಹೋಗಿ ಕಾಳಿ ನದಿಯಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ ನಾಪತ್ತೆಯಾದ ಘಟನೆ ಕಾರವಾರ(Karwar) ತಾಲೂಕಿನ ಸುಂಕೇರಿ ಬಳಿ ನಡೆದಿದೆ.
ಕಡವಾಡದ ಸಂತೋಷ ರಾಯ್ಕರ್ (35) ಕಾಳಿ ನದಿಯಲ್ಲಿ (kali river) ನಾಪತ್ತೆಯಾದ ಯುವಕ ನಾಗಿದ್ದು ,ರಾತ್ರಿ ಸುಂಕೇರಿ ಸೇತುವೆ ಬಳಿ ಕಾಲು ಜಾರಿ ಬಿದ್ದಿದ್ದ ಸಂತೋಷ ನಾಪತ್ತೆಯಾಗಿದ್ದನು.
ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಆತನ ಶವಕ್ಕಾಗಿ ಹುಡುಕಾಟ ನಡೆಸಲಾಗುತಿದ್ದು ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Gokarna-ಅನುಮಾನಾಸ್ಪದವಾಗಿ ಸಾ*** ಕಂಡ ಕಾರ್ಮಿಕ.
ಮೀನುಗಾರಿಕಾ ಬೋಟ್ ನಲ್ಲಿ ಕೆಲಸಕ್ಕೆ ಬಂದಿದ್ದ ಒರಿಸ್ಸಾದ ಕಾರ್ಮಿಕ ಅನುಮಾನಾಸ್ಪದ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗಂಗೆ ಕೊಳ್ಳದಲ್ಲಿ ನಡೆದಿದೆ.
ಇದನ್ನೂ ಓದಿ:-Gokarna: ಸಮುದ್ರಪಾಲಾದ ವೈದ್ಯಕೀಯ ವಿದ್ಯಾರ್ಥಿನಿಯರು
ಸಂಬಲಪುರದ ನಿವಾಸಿ ನಿರಂಜನ್ ಮೃತಪಟ್ಟ ಕಾರ್ಮಿಕ ನಾಗಿದ್ದು ,ಮೀನುಗಾರಿಕೆಗಾಗಿ ಒರಿಸ್ಸಾದಿಂದ ಗೋಕರ್ಣಕ್ಕೆ ಬಂದಿದ್ದನು.ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರ ಆಗಮಿಸಿ ಗೋಕರ್ಣ (gokarna)ಸರ್ಕಾರಿ ಆಸ್ಪತ್ರೆಗೆ ಶವ ರವಾನೆ ಮಾಡಿದ್ದು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.