Karnataka:ಬಿಜೆಪಿ 18 ಶಾಸಕರ ಅಮಾನತು ವಾಪಸ್ - ಸ್ಪೀಕರ್ ಖಾದರ್ ಹೇಳಿದ್ದೇನು?
Karnataka:ಬಿಜೆಪಿ 18 ಶಾಸಕರ ಅಮಾನತು ವಾಪಸ್ - ಸ್ಪೀಕರ್ ಖಾದರ್ ಹೇಳಿದ್ದೇನು?

ಬೆಂಗಳೂರು:- ಕಳೆದ ಮಾರ್ಚ 21 ರಂದು ವಿಧಾನಸಭಾ ಅಧಿವೇಶನದಲ್ಲಿ ಆದ ಗೊಂದಲದ ಘಟನೆಯಲ್ಲಿ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದ್ದು ಎರಡು ತಿಂಗಳ ಬಳಿಕ ಈ ಅಮಾನತನ್ನು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹಿಂಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಅವರು ಅಮನತಾದ ಬಿಜೆಪಿ ಶಾಸಕರು ಆದ ಘಟನೆ ಬಗ್ಗೆ ವಿಶಾಧ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದಲ್ಲಿ ಆಗಿದೆ ಉದ್ದೇಶಪೂರ್ವಕವಾಗಿ ಆಗಿಲ್ಲ ,ಆದ ಘಟನೆ ಬಗ್ಗೆ ಕ್ಷಮೆ ಕೋರಿದ್ದಾರೆ.
ಇದನ್ನೂ ಓದಿ:-Karnataka: ಕರಾವಳಿ ಬಂದರಿನಿಂದ ಹೊರಟ ಸರಕು ಸಾಗಾಟ ಹಡಗು ಮುಳುಗಡೆ- 6 ಜನರ ರಕ್ಷಣೆ
ಇದಲ್ಲದೇ ಬಿಜೆಪಿಯ ಹಿರಿಯ ನಾಯಕರು,ಆರ್,ಅಶೋಕ್ ,ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಗವರ್ನರ್ ಸಹ ಮಾತನಾಡಿದ್ದಾರೆ. ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ ಅಮಾನತನ್ನು ಹಿಂಪಡೆದಿದ್ದೇವೆ ಎಂದರು.
ಇನ್ನು ಯಾವುದಾದರೂ ಕಂಡೀಶನ್ ಹಾಕಲಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕಂಡೀಶನ್ ಇಲ್ಲ,ಅವರು ನಮ್ಮ ಮಿತ್ರರು,ಈರೀತಿ ಮಾಡಬಾರದು ಎಂದು ನಾನು ಸ್ಟಿಕ್ಟ್ ಆಗಿ ಯಾಕ್ಷನ್ ತೆಗೆದುಕೊಂಡಿದ್ದೆ. ಈಗ ಅವರಿಗೆ ಅರ್ಥವಾಗಿದೆ.
ಮುಂದೆ ಈರೀತಿಯ ವರ್ತನೆಯನ್ನು ಅವರು ಮಾಡುವುದಿಲ್ಲ ಎಂದು ನನಗೆ ಅವರ ಪರವಾಗಿ ವಿಶ್ವಾಸವಿದೆ.ಅವರ ಮೇಲೆ ವಿಶ್ವಾಸವಿಟ್ಟು ನಾನು ಹಿಂಪಡೆದಿದ್ದೇನೆ.
ಸ್ಪೀಕರ್ ನಿರ್ಧಾರವನ್ನು ಯಾರು ಕೂಡ ಹಸ್ತಕ್ಷೇಪ ಮಾಡಲಾಗುವುದಿಲ್ಲ,ರಿಕ್ವೆಷ್ಟ್ ಮಾಡಬಹುದು. ನಾವು ಸಕರಾತ್ಮಕವಾಗಿ ತೆಗೆದುಕೊಂಡಿದ್ದೇವೆ ,ನನಗೆ ಅವರು ವೈರಿಗಳಲ್ಲ, ನಮ್ಮ ಶಾಸಕರು ,ಸನ್ಮಿತ್ರರು.ಆ ಗಳಿಗೆಯಲ್ಲಿ ಎಮೋಷನ್ ಆಗಿ ದುರ್ವರ್ತನೆ ತೋರಿದ್ದಾರೆ. ಸಂವಿಧಾನ ಪೀಠಕ್ಕೆ ಅಗೌರವ ತೋರಿಸಿದ್ದರಿಂದ ಹಿಂದೆ ಆ ತೀರ್ಮಾನ ತೆಗೆದುಕೊಂಡಿದ್ದೆ ಎಂದು ಹೇಳಿದ್ದಾರೆ.