ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar : ಕದಂಬ ನೌಕಾದಳದೊಳಗೆ ಫೈರಿಂಗ್ ಪೇಚಿಗೆ ಬಿದ್ದ ಪೊಲೀಸರಿಗೆ ಶಾಕ್ !

ಕಾರವಾರ:- ಕೆಲವು ವಿಷಯಗಳಲ್ಲಿ ಗ್ರಹಿಸುವ ಹಾಗೂ ಹೇಳುವ ಮಾತುಗಳು ವ್ಯತ್ಯಾಸವಾದರೇ ಎಂತಹ ಅಚಾತುರ್ಯ ನಡೆಯುತ್ತದೆ ಎಂಬುದಕ್ಕೆ ಕಾರವಾರದ ಪೊಲೀಸರು ಹಾಗೂ ಪತ್ರಕರ್ತರು ಸಾಕ್ಷಿಯಾಗಿದ್ದಾರೆ. ಹೌದು ಕದಂಬ ನೌಕಾನೆಲೆಯಲ್ಲಿ ಇಂದು ಸಂಜೆ ವೇಳೆಯಲ್ಲಿ ನೌಕಾದಳದವರು ಶಸ್ತ್ರಾಭ್ಯಾಸ ಮಾಡುವಾಗ ಫೈರಿಂಗ್ (Firing ) ಆಗಿ ಓರ್ವ ವ್ಯಕ್ತಿಗೆ ತಗುಲು ಆತನಿಗೆ ತೀವ್ರ ಗಾಯಗೊಂಡು ಮಂಗಳೂರಿಗೆ ಕಳುಹಿಸಲಾಗಿದೆ ಎಂಬ ಸುದ್ದಿ ಹರಡಿದೆ.
10:38 PM Jun 09, 2025 IST | ಶುಭಸಾಗರ್
ಕಾರವಾರ:- ಕೆಲವು ವಿಷಯಗಳಲ್ಲಿ ಗ್ರಹಿಸುವ ಹಾಗೂ ಹೇಳುವ ಮಾತುಗಳು ವ್ಯತ್ಯಾಸವಾದರೇ ಎಂತಹ ಅಚಾತುರ್ಯ ನಡೆಯುತ್ತದೆ ಎಂಬುದಕ್ಕೆ ಕಾರವಾರದ ಪೊಲೀಸರು ಹಾಗೂ ಪತ್ರಕರ್ತರು ಸಾಕ್ಷಿಯಾಗಿದ್ದಾರೆ. ಹೌದು ಕದಂಬ ನೌಕಾನೆಲೆಯಲ್ಲಿ ಇಂದು ಸಂಜೆ ವೇಳೆಯಲ್ಲಿ ನೌಕಾದಳದವರು ಶಸ್ತ್ರಾಭ್ಯಾಸ ಮಾಡುವಾಗ ಫೈರಿಂಗ್ (Firing ) ಆಗಿ ಓರ್ವ ವ್ಯಕ್ತಿಗೆ ತಗುಲು ಆತನಿಗೆ ತೀವ್ರ ಗಾಯಗೊಂಡು ಮಂಗಳೂರಿಗೆ ಕಳುಹಿಸಲಾಗಿದೆ ಎಂಬ ಸುದ್ದಿ ಹರಡಿದೆ.

Karwar : ಕದಂಬ ನೌಕಾದಳದೊಳಗೆ ಫೈರಿಂಗ್ ಪೇಚಿಗೆ ಬಿದ್ದ ಪೊಲೀಸರಿಗೆ ಶಾಕ್ !

Advertisement

ಕಾರವಾರ:- ಕೆಲವು ವಿಷಯಗಳಲ್ಲಿ  ಗ್ರಹಿಸುವ ಹಾಗೂ ಹೇಳುವ ಮಾತುಗಳು ವ್ಯತ್ಯಾಸವಾದರೇ ಎಂತಹ ಅಚಾತುರ್ಯ ನಡೆಯುತ್ತದೆ ಎಂಬುದಕ್ಕೆ ಕಾರವಾರದ ಪೊಲೀಸರು ಹಾಗೂ ಪತ್ರಕರ್ತರು ಸಾಕ್ಷಿಯಾಗಿದ್ದಾರೆ. ಹೌದು ಕದಂಬ ನೌಕಾನೆಲೆಯಲ್ಲಿ ಇಂದು ಸಂಜೆ ವೇಳೆಯಲ್ಲಿ ನೌಕಾದಳದವರು ಶಸ್ತ್ರಾಭ್ಯಾಸ ಮಾಡುವಾಗ ಫೈರಿಂಗ್ (Firing ) ಆಗಿ ಓರ್ವ ವ್ಯಕ್ತಿಗೆ ತಗುಲು ಆತನಿಗೆ ತೀವ್ರ ಗಾಯಗೊಂಡು ಮಂಗಳೂರಿಗೆ ಕಳುಹಿಸಲಾಗಿದೆ ಎಂಬ ಸುದ್ದಿ ಹರಡಿದೆ.

ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.

ಕುದ್ದು ಕಾರವಾರದ ಡಿ.ವೈ.ಎಸ್.ಪಿ ಗಿರೀಶ್ ರವರ ತಂಡ ಅರಗಾದ ಕದಂಬ ನೌಕಾದಳದ ಕಚೇರಿಗೆ ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಈ ವೇಳೆ ನೌಕಾದಳದ ಅಧಿಕಾರಿಗಳೂ ಫೇಚಿಗೆ ಬಿದ್ದಿದ್ದು ಎಲ್ಲಿ ಗುಂಡು ಹಾರಿತು ಎಂಬಬಗ್ಗೆ ಮಾಹಿತಿ ಕಲೆಹಾಕಲು ಶುರುವಿಟ್ಟಿದ್ದಾರೆ.ಅದಕ್ಕೆ ಪೊಲೀಸರು ಸಹ ತಲೆಕೆಡಿಸಿಕೊಂಡು ಮಾಹಿತಿ ಕಲೆಹಾಕುಲು ತನಿಖೆ ಶುರುವಿಟ್ಟಿದ್ದಾರೆ.

ಇದನ್ನೂ ಓದಿ:-Karwar:ಎರಡು ವರ್ಷವಾದ್ರೂ ನಡೆಯದ ಕಾಮಗಾರಿ ಆ ಊರಿಗೆ ಕಚ್ಚಾ ರಸ್ತೆಯೇ ಖಾತ್ರಿ

Advertisement

ಇನ್ನು ಈ ವಿಷಯ ಮಾಧ್ಯಮಗಳಿಗೂ ತಲುಪಿ ನೌಕಾದಳದ ಮೂಲಗಳನ್ನ ಕೆದಕಲು ಪ್ರಾರಂಭಿಸಿದರು. ಇದ್ದ ಸುದ್ದಿ ಮೂಲಗಳನ್ನ ಹುಡುಕಿ ಬ್ರೇಕಿಂಗ್ ಸಿದ್ದಪಡಿಸಿದ್ರೆ , ಪತ್ರಿಕೆಯವರು ಸುದ್ದಿ ರೆಡಿಮಾಡಲು ಕಾಲಂ ಬಿಟ್ಟುಕೊಂಡಿದ್ದರು. ಆದರೇ ಕೊನೆಗೆ ನೌಕಾದಳದಲ್ಲಿ ಯಾವುದೇ ಫೈರಿಂಗ್ ಆಗಿಲ್ಲ, ಯಾರಿಗೂ ಏಟು ತಗಲಿಲ್ಲ ಎಂಬ ಸತ್ಯ ಮಾಹಿತಿ ಹೊರಬಿದ್ದ ನಂತರ ಎಲ್ಲವೂ ತಣ್ಣಗಾಗಿ ಸುಳ್ಳು ಸುದ್ದಿಗೆ ಪೂರ್ಣ ವಿರಾಮ ಬಿದ್ದಿತು.

ಮಂಗಳೂರಿನ ಪೊಲೀಸ್ ಅಧಿಕಾರಿ ಮಾಡಿದ ತಪ್ಪು !

ಕೊಚ್ಚಿಯಲ್ಲಿ ಕೇರಳ ಕರಾವಳಿಯಲ್ಲಿ ಕಂಟೈನರ್ ತುಂಬಿದ್ದ ಸಿಂಗಾಪುರ ಮೂಲದ ಹಡಗಿನಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿತ್ತು.ಇದರಲ್ಲಿ ಇದ್ದ 22 ಜನರನ್ನು ಇಂಡಿಯನ್ ಕೋಸ್ಟ್ ಗಾರ್ಡ ಹಾಗೂ ನೌಕಾದಳದವರು ರಕ್ಷಿಸಿದ್ದರು. ಗಾಯಾಳುಗಳನ್ನು ನೌಕಾದಳದವರು ಮಂಗಳೂರು ಬಂದರಿಗೆ ಕರೆತರುತಿದ್ದರು. ಈ ಮಾಹಿತಿಯನ್ನು ಮಂಗಳೂರು ಪೊಲೀಸ್  ಕಮಿಷಿನರ್ ಗೆ ತಿಳಿಸಲಾಗಿತ್ತು.

ಈ ವಿಷಯವನ್ನು ಮಂಗಳೂರು ಕಮಿಷಿನರ್ ರವರು ತಮ್ಮ ಕೆಳಹಂತದ ಅಧಿಕಾರಿಗೆ ನೋಡಿಕೊಳ್ಳುವಂತೆ ತಿಳಿಸಿದ್ದು ಫೈಯರ್ (fire) ಆಗಿರುವ ಕುರಿತು ನೌಕಾದಳದವರೊಂದಿಗೆ ಮಾಹಿತಿ ಪಡೆಯಲು ಸೂಚಿಸಿದ್ದರು.

ಆದರೇ ಆ ಪೊಲೀಸ್ ಅಧಿಕಾರಿ  ಫೈಯರ್ ಎಂಬುದನ್ನು ಗ್ರಹಿಸುವ ಬದಲು ಫೈರಿಂಗ್ ಎಂದು ಗ್ರಹಿಸಿದ್ದಾರೆ. ನೌಕಾದಳ ಎಂದಿದ್ದರಿಂದ ಸೀದಾ ಕಾರವಾರದ ಕಂಟ್ರೋಲ್ ರೂಮ್ ಗೆ ಕರೆಮಾಡಿ ಕಾರವಾರ ಕದಂಬ ನೌಕಾನೆಲೆಯಲ್ಲಿ ಫೈರಿಂಗ್ ಆಗಿದೆಯಂತೆ ,ಸಿಬ್ಬಂದಿಗೆ ಗಾಯವಾಗಿದೆ ಎಂದು ಹೇಳಿ ಮಾಹಿತಿ ಕೊಡುವಂತೆ ಹೇಳಿದ್ದಾರೆ.

ಇನ್ನು Fire ಎನ್ನುವ ಬದಲು Firing ಎಂದಿದ್ದರಿಂದ ತಲೆಕೆಡಿಸಿಕೊಂಡ ಪೊಲೀಸರು ಕದಂಬ ನೌಕಾನೆಲೆಗೆ ತೆರಳಿ ಯಾರಿಗೆ Firing ಆಗಿದೆ? ಗಾಯಾಳು ಎಲ್ಲಿ ? ಎಂದು ಮಾಹಿತಿ ಕೇಳಿದ್ದಾರೆ. ಈಬಗ್ಗೆ ತಿಳಿಯದ ನೌಕಾಧಿಕಾರಿಗಳು ಸಹ ಏನಾಗಿದೆ ನೌಕಾದಳದ ವಳಗೆ ಎಂದು ತನಿಖೆ ಮಾಡಿದಾಗ ಏನೂ ಆಗಿಲ್ಲ ಎಂಬ ಸತ್ಯ ಹೊರಬಂದಿದೆ.

ಕೊನೆಗೆ ಕದಂಬ ನೌಕಾನೆಲೆಗೆ ತೆರಳಿದ್ದ ಡಿ.ವೈ.ಎಸ್.ಪಿ ತಂಡ ಮರಳಿ ಬಂದಿದ್ದು ಯಾವುದೇ Firing ಘಟನೆ ನಡೆದಿಲ್ಲ ಎಂಬ ವರದಿ ನೀಡಿದ್ದು, ಅಧಿಕಾರಿಗಳ ಜೊತೆ ಪತ್ರಕರ್ತರೂ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.

 

Advertisement
Tags :
Fact checkKadamba naval baseKannda newsKarnataka newsKarwarNavyUttara Kannada
Advertisement
Next Article
Advertisement