Karwar :ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ -ಅವಧಿ ಪೂರ್ವದಲ್ಲೇ ಜಲಸಾಹಸ ಕ್ರೀಡೆಗಳು ಬಂದ್
Karwar :ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ -ಅವಧಿ ಪೂರ್ವದಲ್ಲೇ ಜಲಸಾಹಸ ಕ್ರೀಡೆಗಳು ಬಂದ್

ಕಾರವಾರ :- ರಾಜ್ಯಾಧ್ಯಾಂತ ಚಂಡಮಾರುತದ ಹಿನ್ನಲೆಯಲ್ಲಿ ಅಬ್ಬರದ ಮಳೆ(rain) ಸುರಿಯುತ್ತಿದೆ. ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ಮೇ.20 ಹಾಗೂ 21 ರಂದು ರೆಡ್ ಅಲರ್ಟ ಘೋಷಣೆ ಮಾಡಲಾಗಿದ್ದು ಅವಧಿ ಪೂರ್ವದಲ್ಲೇ ಮುಂಗಾರು ಆಗಮಿಸುವ ಹಿನ್ನಲೆಯಲ್ಲಿ ಜಿಲ್ಲೆಯ ಜಲಸಾಹಸ ಕ್ರೀಡೆಯನ್ನು ಸ್ಥಗಿತ ಗೊಳಿಸಲು ಪ್ರವಾಸೋಧ್ಯಮ ಇಲಾಖೆ ಸೂಚಿಸಿದೆ.
ಇದನ್ನೂ ಓದಿ:-IMD Weather Forecast: ಒಂದು ವಾರಗಳ ಕಾಲ ಮಳೆ ಅಲರ್ಟ
ಈ ಕುರಿತು ಪ್ರವಾಸೋಧ್ಯಮ ಇಲಾಖೆ Tourism department )ಉಪನಿರ್ದೇಶಕರಾದ ಮಂಜುನಾಥ್ ನಾವಿರವರು ಮಾಹಿತಿ ನೀಡಿದ್ದು ,ಮೇ 31 ರ ವರೆಗೂ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳಿಗೆ ಅವಕಾಶ ಮಾಡಿಕೊಡಲಾಗುತಿತ್ತು. ಆದರೇ ಅವಧಿ ಪೂರ್ವದಲ್ಲಿ ಮುಂಗಾರು ಆಗಮಿಸುತ್ತಿದೆ. ಇದಲ್ಲದೇ ಒಂದು ವಾರಗಳ ಕಾಲ ರೆಡ್ ಹಾಗೂ ಆರೆಂಜ್ ಅಲರ್ಟ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಮುರುಡೇಶ್ವರದಲ್ಲಿ ನಡೆಯುವ ಸ್ಕೂಬಾ ಡೈವ್ ಇನ್ನೆರೆಡು ದಿನದಲ್ಲಿ ಬಂದ್ ಮಾಡಿಸುತಿದ್ದು ಈ ವಾರದಲ್ಲೇ ವಾಟರ್ ಸ್ಪೋಟ್ಸ್ ಗಳು ಸಹ ಮುಂದಿನ ಆದೇಶದ ವರೆಗೆ ಬಂದ್ ಇರಲಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಕರಾವಳಿ ಭಾಗದ ಗೋಕರ್ಣ,ಮುರುಡೇಶ್ವರ,ಕಾರವಾರ ಹಾಗೂ ದಾಂಡೇಲಿಯ ಜಲಸಾಹಸ ಕ್ರೀಡೆಗಳು ಬಂದ್ ಆಗಲಿದೆ.
ಇನ್ನು ಜಿಲ್ಲೆಯ ಜಲಪಾತಗಳಿಗೆ ಪ್ರವಾಸಿಗರು ನಿರಂತರ ಆಗಮಿಸುತಿದ್ದು ,ಜೂನ್ ವೇಳೆಯಲ್ಲಿ ಆಗಮಿಸುವ ಪ್ರವಾಸಿಗರಿಗೆ ಜಲಪಾತಗಳಿಗೆ ತೆರಳದಂತೆ ನಿರ್ಬಂಧ ವಿಧಿಸಲಾಗುವು ಎಂದು ಮಾಹಿತಿ ನೀಡಿದ್ದಾರೆ.