Sirsi:ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ ಮ್ಯಾನ್ ಶ್ರೀಧರ್ ಅಮಾನತು- ಎಸ್.ಪಿ ಎಂ ನಾರಾಯಣ್
ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ ಮ್ಯಾನ್ ಶ್ರೀಧರ್ ಅಮಾನತು- ಎಸ್.ಪಿ ಎಂ ನಾರಾಯಣ್
ಕಾರವಾರ:- ನೆಲಮಂಗಲ ರೋಡ್ ರೇಜ್ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ ಮ್ಯಾನ್ ಶ್ರೀಧರ್ ರವರನ್ನು ಮುಂದಿನ ಆದೇಶದ ವರೆಗೂ ಅಮಾನತು ಮಾಡಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಆದೇಶ ಮಾಡಿದ್ದಾರೆ .
ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ ಮ್ಯಾನ್ ಆಗಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತಿದ್ದ ಶ್ರೀಧರ್ ಮಾಜಿ ಸಂಸದರ ಆಪ್ತಕೂಡ. ಇನ್ನು ನೆಲಮಂಗಲದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಇವರು ಸಹ ಆರೋಪಿಯಾಗಿದ್ದು ಇಂದು ಜಾಮೀನು ಪಡೆದಿದ್ದರು. ಆದರೇ ಇದೀಗ ಡಿ.ಆರ್ .ಪೊಲೀಸ್ ವಿಭಾಗದಲ್ಲಿ ಇವರ ಅಮಾನತು ಜೊತೆ ಗಣ್ಯ ವ್ಯಕ್ತಿಗಳಿಗೆ ಗನ್ ಮ್ಯಾನ್ ಆಗಿರುವ ಜಿಲ್ಲೆಯ ಐದು ವರ್ಷಕ್ಕಿಂತ ಹೆಚ್ಚು ಸಮಯ ಸೇವೆ ಮಾಡುತ್ತಿರುವ ಗನ್ ಮ್ಯಾನ್ ಗಳಿಗೆ ಸಹ ಇದೀಗ ಈ ಘಟನೆ ನಂತರ ವರ್ಗಾವಣೆ ಆದೇಶ ಸಹ ಮಾಡಲಾಗಿದ್ದು ಹತ್ತು ಜನ ಗನ್ ಮ್ಯಾನ್ ಗಳಿಗೆ ಇಂದು ವರ್ಗಾವಣೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಆದೇಶ ಮಾಡಿದ್ದಾರೆ