Sirsi:ಅಳಿಯನಿಂದಲೇ ಅತ್ತೆಯ ಕೊಲೆ-ಆಸ್ತಿ ಜಗಳದಲ್ಲಿ ಹೋಯ್ತು ವೃದ್ದೆಯ ಪ್ರಾಣ
ಕಾರವಾರ :-ಜಮೀನು ವಿಷಯದಲ್ಲಿ ಗಲಾಟೆ ಹಿನ್ನಲೆಯಲ್ಲಿ ಅಳಿಯನಿಂದಲೇ ಅತ್ತೆಯನ್ನು ಚಾಕು ಇರಿದು ಕೊಲೆಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಒಕ್ಕಲಕೊಪ್ಪ ದೊಳ್ಳಿಯಲ್ಲಿ ನಡೆದಿದೆ. ಬಸವರಾಜ್ ಪುಟ್ಟಪ್ಪ ನಾಯ್ಕ,ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ಕಮಲಾ ನಾರಾಯಣ ನಾಯ್ಕ( 70) ಕೊಲೆಯಾದ ವೃದ್ದ ಮಹಿಳೆಯಾಗಿದ್ದಾಳೆ
10:47 PM Jul 11, 2025 IST | ಶುಭಸಾಗರ್
Sirsi:ಅಳಿಯನಿಂದಲೇ ಅತ್ತೆಯ ಕೊಲೆ-ಆಸ್ತಿ ಜಗಳದಲ್ಲಿ ಹೋಯ್ತು ವೃದ್ದೆಯ ಪ್ರಾಣ
Advertisement
ಕಾರವಾರ :-ಜಮೀನು ವಿಷಯದಲ್ಲಿ ಗಲಾಟೆ ಹಿನ್ನಲೆಯಲ್ಲಿ ಅಳಿಯನಿಂದಲೇ ಅತ್ತೆಯನ್ನು ಚಾಕು ಇರಿದು ಕೊಲೆಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಒಕ್ಕಲಕೊಪ್ಪ ದೊಳ್ಳಿಯಲ್ಲಿ ನಡೆದಿದೆ.
ಬಸವರಾಜ್ ಪುಟ್ಟಪ್ಪ ನಾಯ್ಕ,ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ಕಮಲಾ ನಾರಾಯಣ ನಾಯ್ಕ( 70) ಕೊಲೆಯಾದ ವೃದ್ದ ಮಹಿಳೆಯಾಗಿದ್ದಾಳೆ.
ಕೊಲೆ ಆರೋಪಿ ಬಸವರಾಜ್ ಪುಟ್ಟಪ್ಪ ನಾಯ್ಕ, ಹತ್ಯೆಯಾದ ವೃದ್ದೆಯ ಮಗಳಾದ ಗೀತಾ ಎಂಬುವವರನ್ನು ವಿವಾಹವಾಗಿದ್ದು , ಗೀತಾಳ ಸಹೋದರ ಮತ್ತು ಬಸವರಾಜ್ ಜಮೀನು ವಿಷಯದಲ್ಲಿ ಆಗಾಗ ಜಗಳವಾಡುತಿದ್ದು ಇಂದು ಇದೇ ವಿಷಯದಲ್ಲಿ ಅತ್ತೆಯೊಂದಿಗೆ ಜಗಳ ತೆಗೆದ ಅಳಿಯ ಚಾಕು ಇರಿದು ಕೊಲೆ ಮಾಡಿದ್ದಾನೆ.
ಕೊಲೆ ಆರೋಪಿ ವಿರುದ್ಧ ಆತನ ಪತ್ನಿಯಿಂದಲ್ಲೇ ದೂರು ನೀಡಿದ್ದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
Advertisement