Sirsi:ಕೇವಲ ಅಧಿಕಾರ ಮತ್ತು ಹಣ ಮಾಡುವುದೇ ಇವತ್ತಿನ ರಾಜಕೀಯ ಸಿದ್ದಾಂತ-ಆರ್.ವಿ ದೇಶಪಾಂಡೆ
ಕೇವಲ ಅಧಿಕಾರ ಮತ್ತು ಹಣ ಮಾಡುವುದೇ ಇವತ್ತಿನ ರಾಜಕೀಯ ಸಿದ್ದಾಂತ-ಆರ್.ವಿ ದೇಶಪಾಂಡೆ.
ಕಾರವಾರ /sirsi :- ಇಂದು ರಾಜಕೀಯದಲ್ಲಿ ಸಿದ್ದಾಂತ ಎಂಬುವುದು ಉಳಿದಿಲ್ಲ,ಕೇವಲ ಅಧಿಕಾರ ಮತ್ತು ಹಣ ಮಾಡುವುದೇ ಇವತ್ತಿನ ಸಿದ್ದಾಂತವಾಗಿದೆ,ಯಾರೂ ಯಾವಾಗ ಬೇಕಾದಾಗ ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಬಹುದಾಗಿದೆ.
ಇದನ್ನೂ ಓದಿ:-Banavasi: ಕದಂಬೋತ್ಸವವ -2025 ಹೈಲೆಟ್ಸ್ ಇಲ್ಲಿದೆ.
ಚಾರಿತ್ರ್ಯ, ಸಿದ್ದಾಂತ ಹಾಗೂ ತತ್ವದ ಬಗ್ಗೆ ಮಾತನಾಡೊಕೆ ಹೊಗಬೇಡಿ ಎಂದು ಮಾಜಿ ಸಚಿವ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ (RV Deshpande) ಕಿಡಿಕಾರಿದ್ದಾರೆ.
ಬಿಜೆಪಿ ರೆಬಲ್ ಶಾಸಕ ಶಿವರಾಮ್ ಹೆಬ್ಬಾರ್ ಕುರಿತು ಶಿರಸಿಯಲ್ಲಿ ಮಾತನಾಡಿದ ಅವರು ನನ್ನ ಜೊತೆಗೂ ಹೆಬ್ಬಾರ್ ಚೆನ್ನಾಗಿದ್ದಾರೆ, ನಾವು ಸಿಕ್ಕಾಗ ಪರಸ್ಪರ ಮಾತನಾಡುತ್ತೇವೆ.
ನನ್ನ ಜೊತೆಗೆ ಶಾಸಕನಾಗಿ ಸಾಕಷ್ಟು ಬಾರಿ ಆಯ್ಕೆ ಆಗಿದ್ದಾರೆ.ಶಾಸಕನಾಗಿ ಒಳ್ಳೆಯ ಅಭಿವೃದ್ದಿ ಮಾಡಿದ್ದಾರೆ, ಒಳ್ಳೆಯ ವರ್ಕರ್ ,ನನ್ನ ಜೊತೆಗೆ ಬಿಜೆಪಿ ಸಂಸದ ಕಾಗೇರಿ ಕೂಡ ಚೆನ್ನಾಗಿದ್ದಾರೆ ಜೊತೆಗಿದ್ದಾರೆ.
ಇದನ್ನೂ ಓದಿ:-Murdeshwar ದೇವಾಲಯದ ಗೋಪುರದ ತುತ್ತ ತುದಿಗೆ ನಿಂತು ಪ್ರವಾಸಿಗ ಮಾಡಿದ್ದೇನು ಗೊತ್ತಾ?
ಹಾಗಂತ ಪಕ್ಷ ಬಿಟ್ಟು ನಮ್ಮ ಜೊತೆ ಬರ್ತಾರೆ ಅಂತ ಹೇಳೊಕೆ ಬರಲ್ಲ, ಹೆಬ್ಬಾರ ಕಾಂಗ್ರೆಸ್ ಸೆರ್ಪಡೆ ಆಗಬೇಕೆಂದು ಎಲ್ಲಿಯೂ ಅರ್ಜಿ ಹಾಕಿಲ್ಲ,ಹೆಬ್ಬಾರ್ ಗೆ ಪಕ್ಷಕ್ಕೆ ಸೆರ್ಪಡೆ ಮಾಡಿಕೊಳ್ಳವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ,ಪಕ್ಷ ನನ್ನ ಅಭಿಪ್ರಾಯ ಕೇಳಿದಾಗ ಎನು ಹೇಳಬೇಕು ಅದನ್ನ ಹೇಳುತ್ತೇನೆ.ನಾನು 1983 ರಿಂದ ಶಾಸಕನಾಗಿದ್ದೇನೆ ಕೂದಲು ಹಣ್ಣಾಗಿ ಬಿಟ್ಟಿದೆ ಎಲ್ಲವನ್ನೂ ನೋಡಿದ್ದೇನೆ ಎಂದರು.