Uttara kannada :ನೆಮ್ಮದಿ ಕದ್ದ ಮಳೆ -ಈ ಪ್ರದೇಶಗಳು ಜನರ ಓಡಾಟಕ್ಕೆ ನಿಷೇಧ!
Uttara kannda :ನೆಮ್ಮದಿ ಕದ್ದ ಮಳೆ -ಈ ಪ್ರದೇಶಗಳು ಜನರ ಓಡಾಟಕ್ಕೆ ನಿಷೇಧ!
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನದಲ್ಲಿ ಕಾರವಾರದಲ್ಲಿ 200 ಮಿ.ಮೀ ಗೂ ಹೆಚ್ಚು ಮಳೆಯಾಗಿದೆ. ಈ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿದವು. ಮನೆಗಳಿಗೆ ನೀರು ನುಗ್ಗಿದರೇ ,ರಸ್ತೆಗಳು ನದಿಯಂತಾದವು. ಹಲವು ಮನೆಗಳ ಗೋಡೆ ಕುಸಿತವಾದವು. ಆದರೇ ಮಳೆಯ ಅಬ್ಬರಕ್ಕೆ ಜಿಲ್ಲೆಯ ಹಲವು ಭಾಗದಲ್ಲಿ ಭೂ ಕುಸಿತ ಕಂಡಿದ್ದು ಇದೀಗ ಜಿಲ್ಲಾಡಳಿತ ಈ ಭಾಗದಲ್ಲಿ ಜನರ ಓಡಾಟ ಹಾಗೂ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಿದೆ.
ಯಾವ ಪ್ರದೇಶದಲ್ಲಿ ನಿರ್ಬಂಧ.?
ಕಾರವಾರ.
ಕಾರವಾರ ನಗರದ ಬಾಡ ಗ್ರಾಮದ ಹಬ್ಬುವಾಡದ ಹೆದ್ದಾರಿ ಪಕ್ಕದ ರಸ್ತೆಯನ್ನು (ಗೋಲ್ಡನ್ ಬೇಕರಿ ಹತ್ತಿರದ ರಸ್ತೆ) ಸಾರ್ವಜನಿಕ ಓಡಾಟ ಹಾಗೂ ವಾಸ್ತವ್ಯ ಮಾಡದಂತೆ ನಿರ್ಬಂಧ ವಿಧಿದಲಾಗಿದೆ. ಈ ಭಾಗದ ಆರು ಮನೆಗಳಲ್ಲಿರುವ ಜನರಿಗೆ ಬೇರೆಡೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.
ಕಾರವಾರ ಭಾಗದ ಲಂಡನ್ ಬ್ರಿಡ್ಜ್ ಭಾಗದ ಟನಲ್ ನ ಮೇಲ್ಭಾಗ ಗುಡ್ಡ ಕುಸಿದಿದ್ದು ಇದರ ಜೊತೆಗೆ ಬಿಣಗಾ ಭಾಗದ ಹೆದ್ದಾರಿಯಲ್ಲಿ ಸಹ ಭೂ ಕುಸಿತವಾಗಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಏಕಮುಖ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ.
ಅಂಕೋಲ
ಅಂಕೋಲ ಭಾಗದ ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಭಾಗದ ಗ್ರಾಮ ,ಉಳವರೆ ಗ್ರಾಮದಲ್ಲಿ ಗುಡ್ಡದ ಹಾಗೂ ನದಿ ಪಕ್ಕದ ನಿವಾಸಿಗಳಿಗೆ ವಾಸ್ತವ್ಯ ಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಈ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಸಹ ನಿರ್ಬಂಧ ವಿಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ,766E ಭಾಗದಲ್ಲಿನ ಭೂ ಕುಸಿತ ವಲಯದಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.
ಭಟ್ಕಳ -ಸಂಚಾರ ನಿಷೇದ -ಪರ್ಯಾಯ ಮಾರ್ಗ.
ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ ವ್ಯಾಪ್ತಿಯ ತಲಗೋಡ ಕೊಂಡರಕೇರಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಸದರಿ ಭಾಗದಲ್ಲಿ ಗುಡ್ಡ ಕುಸಿಯುವ ಸಂಭವ ಇರುವುದರಿಂದ ಸಾರ್ವಜನಿಕ ಸುರಕ್ಷಾತಾ ಹಿತದೃಷ್ಟಿಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ತಡೆಯುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಕನ್ನಡ ಜಿಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ ವ್ಯಾಪ್ತಿಯ ತಲಗೋಡ,ಕೊಂಡರಕೇರಿ ರಸ್ತೆಯಲ್ಲಿ ವಾಹನ/ಸಾರ್ವಜನಿಕ ಸಂಚಾರವನ್ನು ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಭಂದಿಸಿದೆ ಹಾಗೂ ಸದರಿ ರಸ್ತೆಯ ಪರ್ಯಾಯವಾಗಿ ಭಟ್ಕಳ ಮುಗ್ಧಮ್ ಕಾಲೋನಿ ಮುಖಾಂತರ ಪಥ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದ್ದೇಶಿಸಿದ್ದಾರೆ.