For the best experience, open
https://m.kannadavani.news
on your mobile browser.
Advertisement

Shivaram hebbar: ಬಿಜೆಪಿ ನಾಯಕರ ಗುಟ್ಟು ಬಿಚ್ಚಿಡುವ ಎಚ್ಚರಿಕೆ ಕೊಟ್ಟ ಹೆಬ್ಬಾರ್ ಏನಂದ್ರು?

ಕಾರವಾರ :- ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕಾರಣ ಬಿಜೆಪಿ(Bjp) ಪಕ್ಷದಿಂದ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಸೋಮಶೇಕರ್ ರವರನ್ನು ಉಚ್ಚಾಟನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
10:58 AM May 28, 2025 IST | ಶುಭಸಾಗರ್
ಕಾರವಾರ :- ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕಾರಣ ಬಿಜೆಪಿ(Bjp) ಪಕ್ಷದಿಂದ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಸೋಮಶೇಕರ್ ರವರನ್ನು ಉಚ್ಚಾಟನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
shivaram hebbar  ಬಿಜೆಪಿ ನಾಯಕರ ಗುಟ್ಟು ಬಿಚ್ಚಿಡುವ ಎಚ್ಚರಿಕೆ ಕೊಟ್ಟ ಹೆಬ್ಬಾರ್ ಏನಂದ್ರು

Shivaram hebbar: ಬಿಜೆಪಿ ನಾಯಕರ ಗುಟ್ಟು ಬಿಚ್ಚಿಡುವ ಎಚ್ಚರಿಕೆ ಕೊಟ್ಟ ಹೆಬ್ಬಾರ್ ಏನಂದ್ರು?

Advertisement

ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ

ಕಾರವಾರ :- ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕಾರಣ ಬಿಜೆಪಿ(Bjp) ಪಕ್ಷದಿಂದ  ಶಾಸಕ ಶಿವರಾಮ್ ಹೆಬ್ಬಾರ್  ಹಾಗೂ ಸೋಮಶೇಕರ್ ರವರನ್ನು ಉಚ್ಚಾಟನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇವೆಲ್ಲ ಬೆಳವಣಿ  ಆಗಲು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರೇ ಪಕ್ಷದ ವಿರೋಧಿ ಚಟುವಟಿಕೆ ಕಾರಣ. ಅಂದಿನ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಹಿರಿಯ ನಾಯಕರ ಗಮನಕ್ಕೆ ತಂದರೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ನಾಯಕರಿಗೆ ಪಕ್ಷದ ಪ್ರಮುಖ ಸ್ಥಾನ ನೀಡಿದರು.ಹೀಗಾಗಿ ಪಕ್ಷದದಲ್ಲಿ ತಟಸ್ಥವಾವಿರಬೇಕಾಯಿತು ತಟಸ್ಥವಾಗಿದ್ದೆನು.

ಇದನ್ನೂ :- Karwar:ಎರಡು ವರ್ಷವಾದ್ರೂ ನಡೆಯದ ಕಾಮಗಾರಿ ಆ ಊರಿಗೆ ಕಚ್ಚಾ ರಸ್ತೆಯೇ ಖಾತ್ರಿ

ಪಕ್ಷ ನೋಟೀಸ್ ನೀಡಿದಾಗ 16 ಪುಟದ ನನ್ನ ಉತ್ತರ ನೀಡಿದ್ದೇನೆ ಪಕ್ಷ ನಿರ್ಣಯ ತೆಗೆದುಕೊಂಡಿದ್ದು ಆಶ್ಚರ್ಯವೂ ಆಗಿದೆ,ಸಂತೋಷವೂ ಆಗಿದೆ.ಪಕ್ಷ ಏನೇ ನಿರ್ಣಯ ತೆಗೆದಿಕೊಂಡ್ರೂ ಸ್ವಾಗತಿಸುತ್ತೇನೆ ಎಂದಿದ್ದೇನೆ.

ನಾನು ಯಾವ ಪಕ್ಷದಲ್ಲಿ ಚುನಾವಣೆ ನಿಂತಾಗಲೂ ಮುಖಂಡರು ವಿರೋಧ ಮಾಡಿದರೇ ಹೊರತು ಕಾರ್ಯಕರ್ತರು ವಿರೋಧ ಮಾಡಿಲ್ಲ, ಬಿಜೆಪಿಯಲ್ಲಿ ಮುಖಂಡರು ವಿರೋಧ ಮಾಡಿದರು ಕಾರ್ಯಕರ್ತರು ಮಾಡಿಲ್ಲ,ಬಿಜೆಪಿಯಲ್ಲಿ ಎಷ್ಟು ಜನರನ್ನು ಉಚ್ಚಾಟನೆ ಮಾಡಲು ಕಾದಿದ್ದಾರೋ  ಗೊತ್ತಿಲ್ಲ,ಮಾಡುತ್ತನೇ ಇರಲಿ ನಮಗೆ ಹೇಗೆ ರಾಜಕಾರಣ ಮಾಡಬೇಕು ಗೊತ್ತಿದೆ ಮಾಡುತ್ತೇವೆ.ಬಿಜೆಪಿಯ ನಾಯಕರು ನಮ್ಮ ಬಗ್ಗೆ ಮಾತನಾಡಿದರೇ ನಾನು ಮತ್ತು ಎಸ್.ಟಿ ಸೋಮಶೇಕರ್ ಬೆಂಗಳೂರಿನಲ್ಲಿ ಅವರ ಹಣೆಬರಹ ಬಿಚ್ಚಿಡುತ್ತೇವೆ ಎಚ್ಚರಿಕೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ನನ್ನನ್ನು  ಬಿಜೆಪಿಗೆ ತೆಗೆದುಕೊಳ್ಳುವಾಗ ನಾನು ಕಾಂಗ್ರೆಸ್ ನಲ್ಲಿ ಇದ್ದೇನು ಎಂಬ ಸತ್ಯ ಸಂಗತಿ ಬಿಜೆಪಿಗೆ ಗೊತ್ತಿತ್ತು ತಾನೇ , ಹಾಗಿದ್ದರೂ ನನ್ನನ್ನು ಏಕೆ ತೆಗೆದುಕೊಂಡರು?

ನಾನ ಮಂತ್ರಿ ಸ್ಥಾನಕ್ಕಾಗಿ ಬಂದೆ ಎಂದರು ಆದರೇ ನಾನು ಬಂದು ಮಂತ್ರಿಯಾದಾಗ ಯಾರೆಲ್ಲಾ ಮಂತ್ರಿ ಯಾದ್ರು ಎಂಬುದು ಗೊತ್ತಿಲ್ಲವೇ , ಮುಖ್ಯಂಲಮಂತ್ರಿ ಆಕಾಂಕ್ಷೆ ಹೊಂದಿದ್ದ ಯಡಿಯೂರಪ್ಪನವರು ಹೇಗೆ ಮುಖ್ಯಮಂತ್ರಿಯಾದ್ರು ಅಂತ ಸತ್ಯ ಸಂಗತಿ ಬಿಚ್ಚಿಡಬೇಕು.

ನನಗೆ ಪಕ್ಷ ನಡೆಸಿಕೊಂಡ ರೀತಿ ಬೇಜಾರಿದೆ,ಅವಕಾಶ ಇದ್ದಾಗ ಬಳಸಿಕೊಂಡ್ರು,ಅವಕಾಶ ಇಲ್ಲದಿದ್ದಾಗ ಬಿಟ್ಟರು. ಒಬ್ಬ ವ್ಯಕ್ತಿಯನ್ನು ಚುನಾವಣೆ ಗೆ ನಿಂತಾಗ ಸೋಲಿಸುವ ಯತ್ನಮಾಡಿದರಲ್ಲ ಅದಕ್ಕಿಂತ ಬೇರೇನು ಇಲ್ಲ .

ನನ್ನ ತಲೆದಂಡ ಆಗಿದೆ ಎಂದು ನಾನು ಒಪ್ಪಿಕೊಳ್ಳುವುದಿಲ್ಲ ,ನನ್ನ ತಲೆದಂಡ ಮಾಡುವವರು ನನ್ನ ಕ್ಷೇತ್ರದ ಮತದಾರ ಪ್ರಭುಗಳು.ಕಾರ್ಯಕರ್ತರು ಎಲ್ಲದಕ್ಕೂ ಕಾದು ನೋಡಿ ಎಲ್ಲರೊಂದಿಗೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇವೆ.

ಬಿಜೆಪಿ ನಾಯಕರು ನಾವು ಕೊಟ್ಟ ದೂರನ್ನ ಕಸದ ಬುಟ್ಟಿಗೆ ಹಾಕಿದರು,ಪಕ್ಷ ನಿರ್ಣಯ ತೆಗೆದುಕೊಳ್ಳಬೇಕಿತ್ತು ತೆಗೆದುಕೊಳ್ಳಲಿಲ್ಲ ,ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ ಮಿತ್ರರೂ ಇಲ್ಲ  ಎಂದು ಮನೋಜ್ಞವಾಗಿ ಪ್ರತಿಕ್ರಿಯಿಸಿದರು.

ಪ್ರಕೃತಿ ಮೆಡಿಕಲ್ ,ಕಾರವಾರ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ