Sirsi: ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ದಾಳಿ 49 ಲಕ್ಷ ವಶಕ್ಕೆ 19 ಜನರ ಬಂಧನ
Sirsi: ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ದಾಳಿ 49 ಲಕ್ಷ ವಶಕ್ಕೆ 19 ಜನರ ಬಂಧನ
ಕಾರವಾರ/ಶಿರಸಿ:- ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನೆಡೆಸಿ 49 ಲಕ್ಷ ನಗದು ,ನಾಲ್ಕು ಕಾರುಗಳನ್ನು ಹಾಗೂ 15 ಮೊಬೈಲ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಎಸ್.ಪಿ ದೀಪನ್ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ಗೀತಾ ಪಾಟೀಲ್ ನೇತ್ರತ್ವದಲ್ಲಿ ಯಲ್ಲಾಪುರ ಹೆದ್ದಾರಿಯ ಬೈರುಂಬೆ ಗ್ರಾ.ಪಂ ವ್ಯಾಪ್ತಿಯ ಅಗಸಾಲು ಗ್ರಾಮದ ಹಾವೇರಿ ಮೂಲದ ವೈದ್ಯರೋರ್ವರ ವಿ. ಆರ್.ಆರ್. ಹೋಮ್ ಸ್ಟೇ ಗೆ ದಾಳಿ ನಡೆಸಿದ್ದು,ಈ ವೇಳೆ ಅಕ್ರಮವಾಗಿ ಇಸ್ಪೀಟ್ ಆಡುತಿದ್ದ 19 ಜನರನ್ನು ವಶಕ್ಕೆ ಪಡೆದು 49 ಲಕ್ಷ ನಗದು,ನಾಲ್ಕು ಕಾರುಗಳನ್ನು,15 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:-Sirsi:ಶಿರಸಿಯಲ್ಲಿ ಸರಣಿ ಕಳ್ಳತನ ನಗನಾಣ್ಯ ಲೂಟಿ
ಬಂಧಿತರು ಹಾವೇರಿ,ದಾವಣಗೆರೆ ಮೂಲದವರಾಗಿದ್ದು.ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ವು ಹಣದ ವಶ! ತೋರಿಸಿದ್ದು ಕಡಿಮೆ!
ಇನ್ನು ಮೂಲಗಳ ಪ್ರಕಾರ ಇಲ್ಲಿ 30 ಕ್ಕೂ ಹೆಚ್ಚು ಜನರು ಆಟವಾಡುತಿದ್ದರು ಎನ್ನಲಾಗಿದ್ದು ದಾಳಿವೇಳೆ ಎರಡೂವರೆ ಕೋಟಿಗೂ ಹೆಚ್ಚು ಹಣ ಸಿಕ್ಕಿದೆ ಎಂದು ಸ್ಥಳೀಯ ಮಾಧ್ಯಮವೊಂದು ಸುದ್ದಿ ಬಿತ್ತರಿಸಿದೆ. ಈ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಯನ್ನು ಕೇಳಿದಾಗ ಇದನ್ನು ತಳ್ಳಿಹಾಕಿದ್ದು ,ನಂತರ ಮಾಧ್ಯಮಗಳಿಗೆ 49,50,436 ಲಕ್ಷ ಹಣ ವಶಕ್ಕೆ ಪಡೆದಿರುವುದನ್ನು ಸ್ಪಷ ಪಡಿಸಿದ್ದಾರೆ.