Karwar: ವಾಹನ ಪಾರ್ಕಿಂಗ್ ಗಲಾಟೆ - ಪಾರ್ಕಿಂಗ್ ಸಿಬ್ಬಂದಿಗೆ ಥಳಿಸಿದ ಯುವಕನ ವಿರುದ್ಧ ಪ್ರಕರಣ ದಾಖಲು
Karwar: ವಾಹನ ಪಾರ್ಕಿಂಗ್ ಗಲಾಟೆ - ಪಾರ್ಕಿಂಗ್ ಸಿಬ್ಬಂದಿಗೆ ಥಳಿಸಿದ ಯುವಕನ ವಿರುದ್ಧ ಪ್ರಕರಣ ದಾಖಲು.
ಕಾರವಾರ :- ಕಾರು ಸರಿಯಾಗಿ ಪಾರ್ಕ್ ಮಾಡುವಂತೆ ಬುದ್ದಿ ಹೇಳಿದವನಿಗೆ ಥಳಿಸಿ ಹಲ್ಲೆ ಮಾಡಿದ ಘಟನೆ
ಕಾರವಾರ (karwar) ನಗರದ ಗೀತಾಂಜಲಿ ಟಾಕೀಜ್ ಮುಂದೆ ನಡೆದಿದೆ. ಈ ಘಟನೆ ಜೂನ್ 11 ರಂದು ನಡೆದಿದ್ದು ಹಿಗ್ಗಾ ಮುಗ್ಗಾ ಥಳಿಸಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದೀಗ ವಿಡಿಯೋ (video) ವೈರಲ್ ಆಗಿದೆ.
ಇನ್ನು ಮೊದಲು ಈ ಬಗ್ಗೆ ದೂರು ದಾಖಲಾಗದಿದ್ದರೂ ವಿಡಿಯೋ ವೈರಲ್ ಆಗುತಿದ್ದಂತೆ ಕಾರವಾರ ನಗರ ಠಾಣೆಯಲ್ಲಿ ಹಲ್ಲೆಗೊಳಗಾದ ರಾಜೇಶ್ ದೂರು ನೀಡಿದ್ದಾರೆ.
ಇದನ್ನೂ ಓದಿ:-Karwar : ಕದಂಬ ನೌಕಾದಳದೊಳಗೆ ಫೈರಿಂಗ್ ಪೇಚಿಗೆ ಬಿದ್ದ ಪೊಲೀಸರಿಗೆ ಶಾಕ್ !
ಶಿರಸಿ (sirsi) ಮೂಲದ ಗ್ರಾಹಕರು ಬಟ್ಟೆ ಖರೀದಿಗೆ ಬಂದಿದ್ದು ,ಬಟ್ಟೆ ಖರೀದಿ ಬಂದವರು ಟಾಕೀಜ್ ಗೇಟ್ ಮುಂಭಾಗ ಕಾರನ್ನು ಪಾರ್ಕ್ ಮಾಡಿದ್ದರು.
ಕಾರನ್ನು ಬೇರೆ ಕಡೆ ಪಾರ್ಕ್ ಮಾಡುವಂತೆ ಹೇಳಿದ ಪಾರ್ಕಿಂಗ್ ಸಿಬ್ಬಂದಿ ರಾಜೇಶ್ ಬಂಟ್ ನಿಗೆ ಥಳಿಸಲಾಗಿದ್ದು ಇಬ್ಬರೂ ಮಾರಾಮಾರಿ ನಡೆಸಿದ್ದಾರೆ.
ಶಿರಸಿ ಮೂಲದ ಗೌರೀಶ್ ನಾಯ್ಕ್ ಮತ್ತು ವಿವೇಕ್ ದೇವಾಡಿಗ ಎಂಬುವವರು ರಾಜೇಶ್ ನಿಗೆ ಹಲ್ಲೆ ಮಾಡಿದವರಾಗಿದ್ದು, ಶಿರಸಿಯ ಯುವಕನಮೇಲೆಯೂ ರಾಜೇಶ್ ಸಹ ಹಲ್ಲೆ ಮಾಡಿದ್ದಾರೆ. ಈ ಕುರಿತು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

