For the best experience, open
https://m.kannadavani.news
on your mobile browser.
Advertisement

Karwar ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್ ಎಂಟು ಜನ ಮೀನುಗಾರರ ರಕ್ಷಣೆ.

Karwar news :- ಅರಬ್ಬಿ ಸಮುದ್ರ ದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉಡುಪಿ (udupi) ಜಿಲ್ಲೆಯ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಬೋಟ್ ನ ತಳಭಾಗದ ಕಬ್ಬಿಣದ ವೆಲ್ಟಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ.
06:37 PM Jan 14, 2025 IST | ಶುಭಸಾಗರ್
Karwar news :- ಅರಬ್ಬಿ ಸಮುದ್ರ ದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉಡುಪಿ (udupi) ಜಿಲ್ಲೆಯ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಬೋಟ್ ನ ತಳಭಾಗದ ಕಬ್ಬಿಣದ ವೆಲ್ಟಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ.
karwar ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್ ಎಂಟು ಜನ ಮೀನುಗಾರರ ರಕ್ಷಣೆ
boat sank in the Arabian Sea near Karwar eight fishermen were rescued
Uttara kannda Honnavara Congress leader Manjunath

Karwar news :- ಅರಬ್ಬಿ ಸಮುದ್ರ ದಲ್ಲಿ ಮೀನುಗಾರಿಕೆಗೆ ತೆರಳಿದ್ದ ಉಡುಪಿ (udupi) ಜಿಲ್ಲೆಯ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಬೋಟ್ ನ ತಳಭಾಗದ ಕಬ್ಬಿಣದ ವೆಲ್ಟಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ.

Advertisement

ಮುಳುಗುತಿದ್ದ ಬೋಟ್ ನಲ್ಲಿ ಇದ್ದ ಎಂಟು ಜನ ಮೀನುಗಾರರನ್ನು (fishermen) ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ (karwar) 9 ನಾಟಿಕನ್ ಮೈಲುದೂರದ ಲೈಟ್ ಹೌಸ್ ಬಳಿ ಚಲಿಸುತಿದ್ದ ವೇಳೆ ಬೋಟ್ ನ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ.

ಇದನ್ನೂ ಓದಿ:-Karwar ದಲ್ಲಿ ನೌಕಾದಳದಿಂದ ಅತ್ಯಾಧುನಿಕ COMBAT ಟ್ರೈನಿಂಗ್ ಸೆಂಟರ್

ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ನ ಇಂಜಿನ್ ಭಾಗಕ್ಕೆ ನೀರು ಹೊಕ್ಕಿದೆ. ತಕ್ಷಣ ಸ್ಥಳೀಯ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಣೆಮಾಡಿದ್ದಾರೆ.

ಬೋಟ್ ಮುಳುಗಡೆಯಾಗುತ್ತಿರುವ ವಿಡಿಯೋ ವನ್ನು ನಮ್ಮ ಫೇಸ್ ಬುಕ್ ಪೇಜ್ ನಲ್ಲಿ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

https://www.facebook.com/share/v/1BT8LyZNuH/

ಆದರೇ ಮುಳುಗುವ ಹಂತದಲ್ಲಿದ್ದ ಬೋಟ್ ನನ್ನು ದಡಕ್ಕೆ ತರಲು ಪ್ರಯತ್ನ ಪಟ್ಟರೂ ಆಗದೇ ಮಾರ್ಗ ಮಧ್ಯದಲ್ಲೇ ಬೋಟ್ ಮುಳುಗಡೆಯಾಗಿದೆ.

kannadavani news banner
ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ರಕ್ಷಣೆಗೊಳಗಾದ ಎಂಟುಜನ ಮೀನುಗಾರರನ್ನು ಇಂದು ಸಂಜೆ ಕಾರವಾರದ ಬೈತಕೋಲ್ ಬಂದರಿಗೆ ಕರೆತರಲಾಗಿದ್ದು , ಬೋಟ್ ಮುಳುಗಡೆಯಿಂದ ಒಂದು ಕೋಟಿಗೂ ಹೆಚ್ಚು ನಷ್ಟವಾಗಿದ್ದು ,ಮೀನುಗಾರರು ಸುರಕ್ಷಿತವಾಗಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ