Haliyala:ಕುಡಿದು ಜಗಳ ಠಾಣೆಗೆ ಕರೆದೊಯ್ದು ಕೈ ಮುರಿದ ಹಳಿಯಾಳ ಪೊಲೀಸರು !
Haliyala:ಕುಡಿದು ಜಗಳ ಠಾಣೆಗೆ ಕರೆದೊಯ್ದು ಕೈ ಮುರಿದ ಹಳಿಯಾಳ ಪೊಲೀಸರು !
ಕಾರವಾರ:- ಹಳಿಯಾಳದ (Haliyala) ಬಾರೊಂದರಲ್ಲಿ ಕುಡಿದು ಸ್ನೇಹಿತನೊಂದಿಗೆ ಗಲಾಟೆ ಮಾಡಿಕೊಂಡಿದ್ದ ನನ್ನ ಗಂಡನಿಗೆ ಪೊಲೀಸರು ಹಿಗ್ಗಾಮುಗ್ಗ ಥಳಿಸಿ ಕೈ ಮುರಿದಿರುವುದಾಗಿ ಮಹಿಳೆಯೊಬ್ಬರು ಇದೀಗ ಮಾನವ ಹಕ್ಕು ಆಯೋಗಕ್ಕೆ ದೂರುಕೊಡುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಿನ್ನೆ ರಾತ್ರಿ ಹಳಿಯಾಳದಲ್ಲಿ ಕ್ಲೆಯರೆನ್ಸ್ ಪಿಂಟೋ ಎಂಬಾತ ಕಂಠಪೂರ್ತಿ ಕುಡಿದು ಬಾರಿನಲ್ಲಿ ಹೊಡೆದಾಡಿದ್ದಾನೆ. ಈ ವಿಷಯ ಪೊಲೀಸರಿಗೆ ತಿಳಿದು ಸ್ಥಳಕ್ಕೆ ಆಗಮಿಸಿ ವಿಚಾರಿಸಿದ್ದಾರೆ. ಆದ್ರೆ ಕುಡಿದ ಅಮಲಿನಲ್ಲಿ ಪೊಲೀಸರಮೇಲೂ ಹಲ್ಲೆ ಮಾಡಿದ್ದಾನೆ. ಇನ್ನು ಈ ಗಲಾಟೆಯಲ್ಲಿ ಈತನ ಕೈಗೆ ಪೆಟ್ಟಾಗಿದ್ದು ತಕ್ಷಣ ಹಳಿಯಾಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ಈತನನ್ನು ಮನೆಗೆ ಕಳುಹಿಸಿದ್ದು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೇ ಕೈನೋವು ಹೆಚ್ಚಾದ್ದರಿಂದ ಈತನ ಪತ್ನಿ ಧಾರವಾಡದ ಆಸ್ಪತ್ರೆಗೆ ಕರೆದೊಯ್ದಾಗ ಕೈ ಮುರಿದಿರುವುದು ತಿಳಿದಿದೆ.
ಇದನ್ನೂ ಓದಿ:-Haliyala ಬಡವರ ಕೆಲಸ ಮಾಡದ ಅಧಿಕಾರಿ ವಿರುದ್ಧ ಆರ್.ವಿ ದೇಶಪಾಂಡೆ ಗರಂ ! ಕೈಗೆ ಬಂತು ಬಾಟಲ್ ?
ಮೈಯಲ್ಲಿ ಬಾಸುಂಡೆಗಳಿದ್ದು ತನ್ನ ಗಂಡನನ್ನು ಪೊಲೀಸರು ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟ ನಂತರವೂ ಮರಳಿ ಕರೆದೊಯ್ದು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾಳೆ. ಸಧ್ಯ ಘಟನೆಯ ಪೂರ್ಣ ವಿವರ ಹೊರಬರಬೇಕಿದ್ದು ಕುಡುಕನ ರಂಪಾಟ ಇದೀಗ ಬೀದಿಗೆ ಬರುವ ಜೊತೆ ಪೊಲೀಸರ ಕುತ್ತಿಗೆಗೂ ಬಂದಿದೆ.