Goa Liquor :ಒಂದೂವರೆ ವರ್ಷದ ನಂತರ ಗೋವಾ ಮದ್ಯ ವಶಪಡಿಸಿಕೊಂಡ ಅಬಕಾರಿ ಇಲಾಖೆ ಅಧಿಕಾರಿಗಳು- ಸಿಬ್ಬಂದಿಗಳೇ ಇಲ್ಲ ಅಂದ್ರು ಡಿ.ವೈ ಎಸ್.ಪಿ
Goa Liquor :ಒಂದೂವರೆ ವರ್ಷದ ನಂತರ ಗೋವಾ ಮದ್ಯ ವಶಪಡಿಸಿಕೊಂಡ ಅಬಕಾರಿ ಇಲಾಖೆ ಅಧಿಕಾರಿಗಳು- ಸಿಬ್ಬಂದಿಗಳೇ ಇಲ್ಲ ಅಂದ್ರು ಡಿ.ವೈ ಎಸ್.ಪಿ
ಕಾರವಾರ :-ಒಂದೂವರೆ ವರ್ಷದ ನಂತರ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ (uttara Kannada) ಕಾರವಾರ (karwar)ದಲ್ಲಿ ಅಬಕಾರಿ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಅಕ್ರಮವಾಗಿ ಗೋವಾ (goa) ದಿಂದ ಕರ್ನಾಟಕದೆಡೆ ಗೋವಾ ಮದ್ಯ ಸಾಗಾಟ ಮಾಡುತಿದ್ದ ಗೋವಾ ಮದ್ಯ ಹಾಗೂ ವಾಹನ ವಶಕ್ಕೆ ಪಡೆದಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಬಕಾರಿ ಇಲಾಖೆ ಡಿ.ವೈ ಎಸ್.ಪಿ ರಮೇಶ್ ಭಜಂತ್ರಿ ರವರು , ಮಂಗಳೂರು ಕೇಂದ್ರ ಕಚೇರಿಯಿಂದ ಗಡಿಯಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಯಲು ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕಾರವಾರ ತಾಲೂಕಿನ ಮಾಜಾಳಿ ಗಡಿ ಬಳಿಯ ಮಂಗಿನಿ ,ಮುಡುಗೆರಿ ,ಸಿಮೆಂಟ್ ಪ್ಯಾಕ್ಟರಿ, ಸೈಲ್ ಕಾಲೇಜು ಭಾಗದಲ್ಲಿ ತಂಡ ಕಟ್ಟಿಕೊಂಡು ತಪಾಸಣೆ ನಡೆಸಿದ್ದು ನಾಲ್ಕು ಪ್ರಕರಣವನ್ನು ದಾಖಲಿಸಿದ್ದೇವೆ.7 ಲಕ್ಷಕ್ಕೂ ಹೆಚ್ಚು ಮೌಲ್ಯದ ಗೋವಾ ಮದ್ಯ ಹಾಗೂ ನಾಲ್ಕು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.640 ಲೀಟರ್ ಗೋವಾ ಮದ್ಯ ,72 ಲೀಟರ್ ಬಿಯರ್ ಕ್ಯಾನ್ ಗಳು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:-Karwar: ನಕಲಿ ದಾಖಲೆ ನೀಡಿ ನ್ಯಾಯಾಲಯಕ್ಕೆ ವಂಚನೆ- ಮಹಿಳೆಗೆ 14 ದಿನ ನ್ಯಾಯಾಂಗ ಬಂಧನ
ನಾಲ್ಕು ಲಕ್ಷದ ಮೂವತ್ತೇಳು ಸಾವಿರ ಗೋವಾ ಮದ್ಯ , ಎರಡು ಲಕ್ಷದ ಎಂಬತ್ತು ಸಾವಿರ ಮೌಲ್ಯದ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದೇವೆ ,ಆರೋಪಿಗಳು ಪರಾರಿಯಾಗಿದ್ದಾರೆ.ಒಟ್ಟು ಏಳು ಲಕ್ಷದ ಹದಿನೇಳು ಸಾವಿರ ಮೌಲ್ಯದ ಗೋವಾ ಮದ್ಯ ಹಾಗೂ ವಾಹನ ಜಪ್ತಿ ಪಡಿಸಿಕೊಂಡು ವಾಹನ ನೊಂದಣಿ ಸಂಖ್ಯೆ ಆಧರಿಸಿ ವಾಹನ ಮಾಲೀಕರ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದು , ಒಂದೂವರೆ ವರ್ಷದ ವರೆಗೆ ಅಕ್ರಮ ಗೋವಾ ಮದ್ಯ ಸಾಗಾಟವಾದರೂ ಹಿಡಿಯಲು ಸಾಧ್ಯವಾಗಿಲ್ಲ.
ಈ ಕುರಿತು ತಮ್ಮ ಅಸಾಹಯಕತೆ ತೋರಿಸಿದ ಅಬಕಾರಿ ಇಲಾಖೆಯವರು ಸಿಬ್ಬಂದಿ ಕೊರತೆಯಿಂದ ದಾಳಿ ಮಾಡಲು ಹಿನ್ನಡೆಯಾಗಿದೆ.ಹೀಗಾಗಿ ದಾಳಿ ಮಾಡಲು ಸಾಧ್ಯವಾಗುತ್ತಿಲ್ಲ, ಹೋಮ್ ಗಾರ್ಡ ನೀಡಲು ಬರೆದಿದ್ದೇವೆ ಇಬ್ಬರನ್ನು ಮಾತ್ರ ನೀಡಿದ್ದು ದಾಳಿ ಮಾಡಿ ವಶಪಡಿಸಿಕೊಳ್ಳಲು ಸಿಬ್ಬಂದಿಗಳೇ ಇಲ್ಲ, ಮಳೆಯಲ್ಲೇ ಕಷ್ಟಪಟ್ಟು ದಾಳಿ ನಡೆಸಿ ವಶಕ್ಕೆ ಪಡೆದಿದ್ದೇವೆ ಎಂದು ತಮ್ಮ ಅಸಾಹಯಕತೆ ಮೆರೆದಿದ್ದಾರೆ.