For the best experience, open
https://m.kannadavani.news
on your mobile browser.
Advertisement

Weekly Horoscope in Kannda| ವಾರ ಭವಿಷ್ಯ August 19 ರಿಂದ 24 -2024

10:25 AM Aug 19, 2024 IST | ಶುಭಸಾಗರ್
weekly horoscope in kannda  ವಾರ ಭವಿಷ್ಯ august 19 ರಿಂದ 24  2024

ಮೇಷ ರಾಶಿ:ಈ ವಾರದಲ್ಲಿ ನೀವು ಶುಭವನ್ನು ನಿರೀಕ್ಷಿಸಬಹುದು.ವ್ಯಾಪಾರಿಗಳಿಗೆ ( business profit )ಲಾಭ ಇರುವುದು, ನಿರುತ್ಸಾಹವನ್ನೂ ಸರಿಮಾಡಿಕೊಳ್ಳುವ ಮನೋಬಲವು ಈ ವಾರ ನಿಮಗೆ ಬರಲಿದೆ. ಮಕ್ಕಳಿಂದ ಚಿಂತೆ ದೂರವಾಗಿ, ನೆಮ್ಮದಿ‌ ಕಾಣುವಿರಿ. ಬೇಕಾಗಿರುವುದನ್ನು ನೀವು ಪಡೆದುಕೊಳ್ಳುವಿರಿ. ಆರೋಗ್ಯ ಉತ್ತಮ ಇರುವುದು,ಕುಟುಂಬ ಸೌಖ್ಯವಿರಲಿದೆ.

Advertisement

ವೃಷಭ ರಾಶಿ: ಈ ವಾರವು ನಿಮಗೆ ಏಳು,ಬೀಳುಗಳು ಕಷ್ಟಕರ ದಿನ ಕಳೆಯುವಿರಿ ಹೀಗಾಗಿ ಈ ವಾರ ಅಷ್ಟೊಂದು ಹಿತಕರವಲ್ಲ. ಆರೋಗ್ಯ ಸಮಸ್ಯೆ ಕಾಡುವುದು, ಹಣವ್ಯಯ ಹೆಚ್ಚಿದೆ, ಅನಗತ್ಯ ಒತ್ತಡವು ಕಾರ್ಯದಲ್ಲಿ ಹಿನ್ನಡೆ ತರಬಹುದು. ವ್ಯವಹಾರದಲ್ಲಿ ಲೋಪ ,ಉದ್ಯಮವು ನಿರೀಕ್ಷಿತ ಲಾಭವನ್ನು ಪಡೆಯದೇ ಇರಬಹುದು.ಕ್ರಿಯಾಶೀಲತೆ ಇಲ್ಲದೇ ಸೋಲು ಕಾಣುವಿರಿ. ಕುಟುಂಬ ಕಲಹ ವಿರೋಧಗಳು ಹೆಚ್ಚಿರುವುದು.ಆರ್ಥಿಕ ಲಾಭ ನಿರೀಕ್ಷೆ ಈ ವಾರ ಸಿಗದು.

ಮಿಥುನ ರಾಶಿ: ಈ ವಾರ ನಿಮಗೆ ಏರಿಳಿತದ ವಾರವಾಗಿದೆ.ಉದ್ಯೋಗಿಗಳಿಗೆ ತೊಂದರೆ, ಕೃಷಿಕರಿಗೆ ಲಾಭ ಇರದು, ವ್ಯಾಪಾರಿಗಳಿಗೆ ಏರಿಳಿತ ವಿರುವುದು. ವಾರದ ಮಧ್ಯ ಭಾಗದಲ್ಲಿ ಶಾಂತಿ ಇರುವುದು, ಹಿತಶತ್ರುಗಳ ಕಾಟ ,ಮಹಿಳೆಯರಿಗೆ ಕಲಹ ,ದೇಹಾಯಾಸ ಹೆಚ್ಚು. ಹೊಸ ಕೆಲಸದಲ್ಲಿ ಶುಭ ಇರದು.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಶುಭ. ಏಕಾದಶದಲ್ಲಿ ಇರುವ ಗುರುವಿನ ಪ್ರಭಾವದ ಮೇಲೆ ಸಂಕಷ್ಟಗಳು ದೂರಾಗುವುದು. ನಿಮ್ಮ ಮೇಲೆ ಯಾರಾದರೂ ಪ್ರಭಾವ ಬೀರುವ ಸಾಧ್ಯತೆ ಇದೆ. ಆತುರದ ನಿರ್ಧಾರ ದಿಂದ ಹಿನ್ನಡೆ. ಮಕ್ಕಳ ಬಗ್ಗೆ ಜಾಗೃತದಿಂದಿದಿರಿ,ಕೆಲಸ ಕಾರ್ಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ತಂದೆಯ ಜೊತೆ ಕಲಹವಾಗುವ ಸಾಧ್ಯತೆ ಇದೆ. ಬೇರೆಯವರ ಅವಲಂಬನೆಯನ್ನು ಬಿಡುವುದು ಒಳಿತು.

ಸಿಂಹ ರಾಶಿ: ಈವಾರ ನಿಮಗೆ ಮಿಶ್ರಫಲವು ಇರಲಿದೆ. ನಿಮಗೆ ಸಿಗುವ ಅವಕಾಶಗಳು ತಪ್ಪಿಹೋಗುವುದು. ಕೋಪವನ್ನು ಕಡಿಮೆ‌ಮಾಡಿಕೊಳ್ಳಲು ಪ್ರಯತ್ನಿಸುವುದು ಮುಖ್ಯ. ಆದಾಯದಲ್ಲಿ ಕೊರತೆ ಕಾಣಿಸುವುದು. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ.ಮಹಿಳೆಯರಿಗೆ ಮಿಶ್ರ ಫಲಗಳಿವೆ, ಚಿನ್ನ ಬೆಳ್ಳಿ ( gold ,silver) ವ್ಯಾಪಾರಿಗಳಿಗೆ ಲಾಭ, ರಾಜಕೀಯ ವ್ಯಕ್ತಿಗಳಿಗೆ ಅಲ್ಪ ಹಿನ್ನಡೆ ಇದೆ.

ಕನ್ಯಾ ರಾಶಿ: ಈ ವಾರ ಶುಭ. ನಿಮ್ಮ ಆರೋಗ್ಯದಲ್ಲಿ ಏರಿಳಿತ ಇರಲಿದೆ.ಭೂ ವಿವಾದದಿಂದ ಸಮಸ್ಯೆ,ಸಾಲ ಪಡೆದ ವ್ಯಕ್ತಿಗಳು ಅವುಗಳನ್ನು ಮರುಪಾವತಿಸಲು ತೊಂದರೆಗಳನ್ನು ಎದುರಿಸಬಹುದು.ಆರ್ಥಿಕ ಏರಿಳಿತ ಇರುವುದು ,ಮಹಿಳೆಯರಿಗೆ ಶುಭ ,ಪ್ರಭಾವಿ ವ್ಯಕ್ತಿಗಳ ಜೊತೆಗೆ ಸಂಪರ್ಕ ಸಾಧಿಸುವ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ. ಈ ವಾರ ದೀರ್ಘಾವಧಿಯ ಯೋಜನೆಯ ಸಿದ್ಧತೆ ಮಾಡಿಕೊಳ್ಳಿರಿ. ಕೃಷಿಕರಿಗೆ ಲಾಭ, ಉದ್ಯೋಗಿಗಳಿಗೆ (Job) ಮಧ್ಯಮ ಹಾಗೂ ವ್ಯಾಪಾರಿಗಳಿಗೆ ಉತ್ತಮ ಲಾಭ ಈ ವಾರ ಪಡೆಯಬಹುದಾಗಿದೆ.

ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಮಿಶ್ರಫಲ. ಪತ್ರವ್ಯವಹಾರದಲ್ಲಿ ನಿಮಗೆ ಕುಶಲತೆ ಇರುವುದು ಈ ವಾರ ಗೊತ್ತಾಗುವುದು. ಇನ್ನೊಬ್ಬರ ಮನವೊಲಿಸುವ ಪ್ರಯತ್ನವು ವಿಫಲವಾಗುವುದು. ಯಾವುದಾದರೂ ಘಟನೆಯು ಸ್ವಾಭಿಮಾನಕ್ಕೆ ತೊಂದರೆ ಕೊಟ್ಟೀತು. ಯಾವುದೇ ಸಾಲ ನೀಡಿದರೂ ಅದು ಮರಳಿ ಬರಲಿದೆ. ನಿಮ್ಮ ನಿರ್ಧಾರಗಳು ನೌಕರರ‌ ಮೇಲೆ‌ ವಿಪರೀತ ಪರಿಣಾಮವನ್ನು ಬೀರುವುದು. ಈ ವಾರದಲ್ಲಿ ಮಾತಿಗೆ ತಪ್ಪುವ ಅವಕಾಶಗಳು ಹೆಚ್ಚು ಕಾಣಿಸುವುದು.ಆರ್ಥಿಕ ವಾಗಿ ಮಧ್ಯಮ ,ಮಿಶ್ರ ಫಲ ಇರುವುದು.

ವೃಶ್ಚಿಕ ರಾಶಿ; ಆಗಸ್ಟ್ ತಿಂಗಳ ಮೂರನೇ ವಾರ ನಿಮಗೆ ಶುಭ. ಎಲ್ಲದರಲ್ಲಿಯೂ ಅಂತರ ಕಾಯ್ದುಕೊಂಡು ನಿಮ್ಮ ಕಾರ್ಯವನ್ನು ಪೂರ್ಣ ಮಾಡಿಕೊಳ್ಳುವಿರಿ. ಕೆಲಸವಿದ್ದಾಗ ಮಾತ್ರ ನಿಮ್ಮ ಸ್ಥಾನವನ್ನು ಬಿಡುವುದು ಸೂಕ್ತ. ಈ ವಾರದಲ್ಲಿ ಯಾರಾದರೂ ನಿಮಗೆ ಆಗಬಾರದ ಮಾತುಗಳನ್ನು ಆಡುವರು. ಮನೋರಂಜನೆಗೆ ಅವಕಾಶವನ್ನು ಮಾಡಿಕೊಳ್ಳುವಿರಿ. ಮಕ್ಕಳಿಗಾಗಿ ಓಡಾಟ ಮಾಡಬೇಕಾದೀತು. ಜಾಗರೂಕತೆಯಿಂದ ವ್ಯವಹಾರ ಮಾಡುವುದು ಅನಿವಾರ್ಯವಾಗಲಿದೆ. ಸುಮಂಗಲಿಯರಿಗೆ ಭೋಜನ‌ ಮಾಡಿಸಿ.

ಧನು ರಾಶಿ: ಈ ರಾಶಿಯವರಿಗೆ ಈ ವಾರ ಅಶುಭ ಫಲ ಹೆಚ್ಚು , ಕಬ್ಬಿಣ ಕಾದಾಗಲೇ ಅದಕ್ಕೆ ಕೊಡಬೇಕಾದ ರೂಪವನ್ನು ಕೊಡುವುದು ಉತ್ತಮ. ಯುಕ್ತಿಯಿಂದ ಸಾಧಿಸಲು ಸಾಧ್ಯವಾಗುವುದನ್ನು ಶಕ್ತಿಯಿಂದ ಮಾಡುವುದು ಬೇಡ. ನಿಮಗೆ ನಂಬಿಕೆ ಕಡಿಮೆ. ಎಲ್ಲವನ್ನೂ ಅನುಕರಣೆ ಮಾಡುವಿರಿ ಅಷ್ಟೇ. ನೇರ ಮಾತುಗಳನ್ನು ಆಡಿದ ಮಾತ್ರ ನಡೆಯೂ ನೇರವಾಗಿರಬೇಕೆಂದಿಲ್ಲ. ನಿಮ್ಮ ಕರ್ತವ್ಯವನ್ನು ಲೋಪ ಮಾಡದೇ ನಿರ್ವಹಿಸಿ. ಅನಗತ್ಯ ಸಲಹೆಗಳನ್ನು ನೀವು ಕೇಳಿ ಚಿಂತೆಗೊಳ್ಳುವಿರಿ.ಮಾನಸಿಕ ನೆಮ್ಮದಿಗೆ ಕ್ಷೇತ್ರ ಪ್ರಯಾಣ ಹಿತಕರ ಅನುಭವ ನೀಡುವುದು. ಉದ್ಯಮಿಗಳಿಗೆ ನಷ್ಟ,ವ್ಯಾಪಾರಿಗಳಿಗೆ ಮಧ್ಯಮ ಲಾಭ ಇರುವುದು.

ಮಕರ ರಾಶಿ: ಈ ರಾಶಿಯವರಿಗೆ ಈ ವಾರ ಶುಭ ಕಾಣಬಹುದು, ವ್ಯಾಪಾರ ವೃದ್ಧಿ,ಉದ್ಯೋಗಿಗಳಿಗೆ ಲಾಭ, ಯತ್ನ ಕಾರ್ಯ ಅಡಚಣೆ ಇದ್ದರೂ ಯಶಸ್ಸು ಪಡೆಯಬಹುದಾಗಿದೆ.ಸ್ನೇಹಿತರಿಂದ ಲಾಭವಾಗಲಿದೆ. ಕುಟುಂಬದಲ್ಲಿ ಮಧ್ಯಮ ನೆಮ್ಮದಿ ಇರುವುದು ಆದರೂ ಆಗಾಗ ಮಾನಸಿಕ ವೇದನೆ ಕಾಡುವುದು. ಕೃಷಿಕರಿಗೆ ಲಾಭ ನಿರೀಕ್ಷೆ ಇರದು.

ಕುಂಭ ರಾಶಿ: ಈ ವಾರ ಶುಭ. ನಿಮ್ಮ ಉದಾರ ಮನೋಭಾವವು ಯಾವುದೋ ರೀತಿಯಲ್ಲಿ ಕಾರ್ಯವನ್ನು ಮಾಡುತ್ತದೆ. ಈ ವಾರ ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುವಿರಿ. ಇತರರ ಬಗ್ಗೆ ಆಲೋಚಿಸಲೂ ನಿಮಗೆ ಸಮಯ ಸಿಗದು. ಸಂಗಾತಿಯ ದುಃಖವನ್ನು ನಿವಾರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುವಿರಿ. ಕಪ್ಪು ತಿಲವನ್ನು ಸಂಕಲ್ಪ ಪೂರ್ವಕವಾಗಿ ದಾನ‌ ಮಾಡಿ.

ಮೀನ ರಾಶಿ: ಈ ವಾರ ಮಿಶ್ರ ಫಲ. ಈ ವಾರದಲ್ಲಿ ಸ್ನೇಹಿತರ ಜೊತೆ ಸುಂದರ ಸಮಯವನ್ನು ಕಳೆಯುವರು. ಹಣಕಾಸಿನ ಕೊರತೆ ಕಂಡುಬಂದರೂ ಅನಂತರ ಅದು ಅನಿರೀಕ್ಷಿತವಾಗಿ ಸರಿಯಾಗುವುದು. ಒಳ್ಳೆಯವರಿಗೆ ಒಳ್ಳೆಯ ಮನಸ್ಸಿನಿಂದ ದಾನ ಮಾಡುವಿರಿ. ಹೊಸಬರ ಭೇಟಿಯು ನಿಮಗೆ ಆಹ್ಲಾದವನ್ನೂ ಉತ್ಸಾವನ್ನೂ ಕೊಡುವುದು. ನಿಮ್ಮ ಯೋಜನೆಗಳು ಪೂರ್ಣತೆಯನ್ನು ಬಹಳ ಬಲದಿಂದ ಕಾಣುವುದು. ಗೋಪೂಜೆಯಿಂದ ಮನಸ್ಸಿಗೆ ನೆಮ್ಮದಿ ಇದೆ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ