%e0%b2%85%e0%b2%aa%e0%b2%b0%e0%b2%be%e0%b2%a7
Karwar| ಬೆಳಂಬೆಳಗ್ಗೆ ಪುಣೆ ಮೂಲದ ಉದ್ಯಮಿ ಹತ್ಯೆ !
ಕಾರವಾರ:- ಬೆಳಂಬೆಳಿಗ್ಗೆ ಉದ್ಯಮಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ತಾಲೂಕಿನ ಹಣಕೋಣದಲ್ಲಿ ನಡೆದಿದೆ.ಮಹಾರಾಷ್ಟ್ರದ ಪುಣೆಯ ಎಲಕ್ಟ್ರಾನಿಕ್ ವಸ್ತುಗಳ ಮಾರಾಟ ಮಾಡುತಿದ್ದ ಉದ್ಯಮಿ ವಿನಾಯಕ ನಾಯ್ಕ (52) ಕೊಲೆಯಾದ ದುರ್ದೈವಿಯಾಗಿದ್ದು ಪತ್ನಿ ವೈಶಾಲಿಗೆ ಗಂಭೀರ ಗಾಯವಾಗಿದ್ದು ಕಾರವಾರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಹಣಕೊಣ ದಿಂದ ಪುಣೆಗೆ ಹೊರಡಲು ಸಿದ್ದವಾಗಿದ್ದ ಇವರಿಗೆ ಐದು ಜನರ ತಂಡ ಕಾರಿನಲ್ಲಿ ಬಂದು ಹತ್ಯೆ ನಡೆಸಿ ಹೋಗಿದ್ದು ವಿನಯ್ ರವರ ಸಹೋದರಿ ಉಜ್ವಲ್ ರವರು ಕರೆ ಮಾಡಿದರೂ ಸ್ವೀಕರಿಸದ ಕಾರಣ ಕಾರವಾರದಲ್ಲಿದ್ದ ಸಹೋದರಿ ಹಣಕೋಣದ ಇವರ ಮನೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.09:21 AM Sep 22, 2024 IST